ರಾಮನಗರ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ನೈತಿಕತೆ ಇದ್ದರೆ ಈಶ್ವರಪ್ಪ ಅವರು ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲೇ ಒಳಜಗಳ ನಡೆಯುತ್ತಿದೆ. ಈಶ್ವರಪ್ಪನವರೇ ಕಾಂಗ್ರೆಸ್ನವರಿಗೆ ಆಹಾರವಾಗಬೇಡಿ. ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲೇ ಚಿತಾವಣೆ ನಡೆಯುತ್ತಿದೆ ಎಂದರು.
ಎಲ್ಲಾ ಇಲಾಖೆಯಲ್ಲೂ ಕಮಿಷನ್ ನಡೆಯುತ್ತಿದೆ. ಇದೊಂದು ಇಲಾಖೆಗೆ ಮಾತ್ರ ಯಾಕೆ ಪರ್ಸೆಂಟೆಜ್ ಆರೋಪ ಮಾಡಿದ್ದೀರಿ. ಈಶ್ವರಪ್ಪ ನವರ ಮೇಲೆ ಆರೋಪ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ.ಈ ಕಳಂಕದಿಂದ ಹೊರಬೇಕು ಹೀಗಾಗಿ ರಾಜೀನಾಮೆ ಕೊಡಬೇಕು ಹಾಗೂ ಈ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದಿದ್ದಾರೆ.
ನನಗಾದ ಅವಮಾನ ಮರೆತಿಲ್ಲ, ಹನಿ ನೀರಿಗಾಗಿ ಹೋರಾಡುವೆ… ಎನ್ನುತ್ತಲೇ ಭಾವುಕರಾದ ದೇವೇಗೌಡ
ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್ ಯೂ ನಾನಿ ಎಂದಿದ್ದು ಏಕೆ?