More

    ಈಶ್ವರಪ್ಪನವರೇ ರಾಜೀನಾಮೆ ನೀಡಿ: ಎಚ್​.ಡಿ.ಕುಮಾರಸ್ವಾಮಿ

    ರಾಮನಗರ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ನೈತಿಕತೆ ಇದ್ದರೆ ಈಶ್ವರಪ್ಪ ಅವರು ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

    ರಾಮನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲೇ ಒಳಜಗಳ ನಡೆಯುತ್ತಿದೆ. ಈಶ್ವರಪ್ಪನವರೇ ಕಾಂಗ್ರೆಸ್​ನವರಿಗೆ ಆಹಾರವಾಗಬೇಡಿ. ನಿಮ್ಮ ವಿರುದ್ಧ ನಿಮ್ಮ ಪಕ್ಷದಲ್ಲೇ ಚಿತಾವಣೆ ನಡೆಯುತ್ತಿದೆ ಎಂದರು.

    ಎಲ್ಲಾ ಇಲಾಖೆಯಲ್ಲೂ ಕಮಿಷನ್​ ನಡೆಯುತ್ತಿದೆ. ಇದೊಂದು ಇಲಾಖೆಗೆ ಮಾತ್ರ ಯಾಕೆ ಪರ್ಸೆಂಟೆಜ್​ ಆರೋಪ ಮಾಡಿದ್ದೀರಿ. ಈಶ್ವರಪ್ಪ ನವರ ಮೇಲೆ ಆರೋಪ ಮಾಡುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ.ಈ ಕಳಂಕದಿಂದ ಹೊರಬೇಕು ಹೀಗಾಗಿ ರಾಜೀನಾಮೆ ಕೊಡಬೇಕು ಹಾಗೂ ಈ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಲು ಸರ್ಕಾರಕ್ಕೆ ಒತ್ತಡ ಹಾಕಬೇಕು ಎಂದಿದ್ದಾರೆ.

    ನನಗಾದ ಅವಮಾನ ಮರೆತಿಲ್ಲ, ಹನಿ ನೀರಿಗಾಗಿ ಹೋರಾಡುವೆ… ಎನ್ನುತ್ತಲೇ ಭಾವುಕರಾದ ದೇವೇಗೌಡ

    ಪ್ರಿಯಾಂಕಾ ಛೋಪ್ರಾ ಅಜ್ಜಿಯನ್ನು ನೆನಪಿಸಿ,ಮಿಸ್​ ಯೂ ನಾನಿ ಎಂದಿದ್ದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts