More

    ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆಗೆ ನೋಟಿಸ್ ನೀಡಿ ಶಾಕ್​ ಕೊಟ್ಟ ಜಿಲ್ಲಾಡಳಿತ

    ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಅವರಿಂದ ನೋಟಿಸ್ ಜಾರಿಯಾಗಿದೆ.

    ವಸತಿ ಯೋಜನೆಯಡಿ ಫಲಾನುಭಾವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವ ಹಿನ್ನಲೆಯಲ್ಲಿ ನೋಟಿಸ್​ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: VIDEO| ಸಿಸಿಟಿವಿಯಲ್ಲಿ ಸೆರೆಯಾಯ್ತು ಪಾಕ್​ ವಿಮಾನ ಪತನದ ಭೀಕರ ದೃಶ್ಯ…!

    ಭಾಲ್ಕಿಯಲ್ಲಿ 91 ಕೋಟಿ ರೂ. ಅಕ್ರಮ ನಡೆದಿದೆ‌ ಎಂಬ ಆರೋಪವಿದೆ. 9 ಸಾವಿರಕ್ಕೂ ಹೆಚ್ಚು ಮನೆಗಳು ಬೋಗಸ್ ಫಲಾನುಭಾವಿಗಳಿಗೆ ಆಯ್ಕೆ ಮಾಡಲಾಗಿದೆ ಎಂದು ಖುದ್ದು ರಾಜೀವ್ ಗಾಂಧಿ ವಸತಿ ನಿಗಮದ ಎಂ.ಡಿ ನೇತೃತ್ವದಲ್ಲಿ ನಡೆದ ತನಿಖೆಯಿಂದ ಪತ್ತೆಯಾದ ಹಿನ್ನೆಲೆಯಲ್ಲಿ ಶಾಸಕ ಖಂಡ್ರೆಗೆ ನೋಟಿಸ್ ಜಾರಿಯಾಗಿದೆ.

    2015-16 ರಿಂದ 2018-19 ರವರೆಗೆ ಅನುಷ್ಠಾನಗೊಂಡ ಮನೆಗಳ ಆಯ್ಕೆಯಲ್ಲಿ ಭಾರಿ ಅಕ್ರಮ ಪತ್ತೆ ಹಚ್ಚಿದ ರಾಜೀವ ಗಾಂಧಿ ವಸತಿ ನಿಗಮದ ತಂಡ ತನಿಖೆ ನಡೆಸುವ ಮೂಲಕ ಅಕ್ರಮ ಬಯಲು ಮಾಡಿದ್ದಾರೆ.

    ಇದನ್ನೂ ಓದಿ: 36 ತಾಸು ಕರೊನಾ ಕರ್ಫ್ಯೂ: ಇಂದು ರಾತ್ರಿ 7ರಿಂದ ಸೋಮವಾರ ಬೆಳಗ್ಗೆ 7ರವರೆಗೆ ಬಂದ್

    ಖುದ್ದು ಶಾಸಕರ ಆಪ್ತ ಸಾಹಯಕರಾದ ಬಸವರಾಜ ಹಾಗೂ ಉಮೇಶ ಇಬ್ಬರು ಅವರ ಖಾಸಗಿ ಮೊಬೈಲ್ ಬಳಸಿ ಜತೆಗೆ ಶಾಸಕರ ಮನೆಯಿಂದ ಖಾಸಗಿ ಕಂಪ್ಯೂಟರ್​ಗಳನ್ನು ಬಳಕೆ ಮಾಡಿಕೊಂಡು ಜನರಿಗೆ ಮನೆ ಮಂಜೂರಾತಿ ಆದೇಶ ಪತ್ರವನ್ನು ನೀಡುವ ಮೂಲಕ ಭಾರಿ ಅಕ್ರಮ ಎಸಗಿರುವ ಬಗ್ಗೆ ತನಿಖೆಯಿಂದ ಬಯಲಾದ ಹಿನ್ನಲೆಯಲ್ಲಿ ಡಿ.ಸಿ ಹಾಗೂ ಸಿಇಓ ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    Photo Gallery| ಬರ್ತಡೇ ಖುಷಿಯಲ್ಲಿ ಸಂಯುಕ್ತಾ: ಸ್ಯಾಂಡಲ್​ವುಡ್​ ಬೆಡಗಿಯ ಮುದ್ದಾದ ಚಿತ್ರಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts