ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವನ್ನಪ್ಪಿ ಒಂದು ತಿಂಗಳ ಮೇಲಾಯಿತು. ಅವರ ಸಾವಿನ ಕುರಿತು ತನಿಖೆ ನಡೆಯುತ್ತಿದೆಯಾದರೂ, ಯಾವುದೂ ಸ್ಪಷ್ಟತೆ ಇಲ್ಲ. ಸಿಬಿಐಗೆ ನೀಡಿ ಎಂದು ಒಂದಷ್ಟು ಪಟ್ಟು ಹಿಡಿದರೆ, ಘಟಾನುಘಟಿಗಳ ಕೈವಾಡವಿದೆ ಎಂದೂ ಆರೋಪಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸುಶಾಂತ್ ಹೆಸರಲ್ಲಿ ಇದೀಗ ಪರಿಹಾರ ನಿಧಿ ತೆರೆಯಲಾಗಿದೆ.
ಇದನ್ನೂ ಓದಿ: ಸುಶಾಂತ್ ದಿನಾ ಪಿಕಪ್ ಮಾಡುತ್ತಿದ್ದ … ಹಳೆಯ ನೆನಪುಗಳನ್ನು ಮೆಲುಕು ಹಾಕಿದ ರಿಚಾ
ಹೌದು, ಬಾಲಿವುಡ್ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ಸುಶಾಂತ್ ನೆನಪಲ್ಲಿ ಹೊಸದೊಂದು ಕಾರ್ಯಕ್ಕೆ ಕೈ ಹಾಕಿದ್ದಾರೆ. ಮಾನಸಿಕ ಆರೋಗ್ಯ ಜಾಗೃತಿ ಮೂಡಿಸುವುದರ ಕುರಿತು ಪವಿತ್ರ ರಿಶ್ತಾ ಫಂಡ್ ತೆರೆದಿದ್ದಾರೆ. ಈ ನಿಧಿಯ ಮೂಲಕ ಮಾನಸಿಕ ಖಿನ್ನತೆ ಅಥವಾ ಮಾನಸಿಕವಾಗಿ ದುರ್ಬಲರಾದವರನ್ನು ಸರಿಪಡಿಸುವ ಸಲುವಾಗಿ ಪರಿಹಾರ ನಿಧಿ ತೆರೆದಿದ್ದಾರೆ.
ಇದನ್ನೂ ಓದಿ: ಈ ಮಿಲ್ಕಿ ಬ್ಯೂಟಿಗೆ ಕಾಜಲ್ ತರಹ ಆಗೋ ಆಸೆಯಂತೆ!
ಸುಶಾಂತ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೆ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ. ಆ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದು ಏಕ್ತಾ ಕಪೂರ್. ಅಂದಿನಿಂದ ಇಬ್ಬರೂ ಸ್ನೇಹಿತರು. ಇದೀಗ ಸ್ನೇಹಿತನ ಅಗಲಿಕೆ ಹಿನ್ನೆಲೆಯಲ್ಲಿ ಮಾನಸಿಕವಾಗಿ ಒತ್ತಡಕ್ಕೊಳಗಾದವರನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ಕೆ ಕೈ ಹಾಕಿದ್ದು, ಸಿನಿಮಾ ಸಹೋದ್ಯೋಗಿಗಳಿಂದಲೂ ಈ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. (ಏಜೆನ್ಸೀಸ್)
ಆರ್ಆರ್ಆರ್ ಕೈಬಿಟ್ಟ ರಾಜಮೌಳಿ, ಮಹೇಶ್ ಬಾಬು ಸಲುವಾಗಿ ಫಾರ್ಮ್ಹೌಸ್ ಸೇರಿದ್ದೇಕೆ?