More

    ಜೆ&ಕೆ ಬ್ಯಾಂಕ್ ಹಣ ಅಕ್ರಮ – ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿವಿಧೆಡೆ ದಾಳಿ

    ನವದೆಹಲಿ: ಜೆ&ಕೆ ಬ್ಯಾಂಕ್​ನ ವಿವಿಧ ಖಾತೆಗಳ ಮೂಲಕ ನಡೆದಿರುವ ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಶನಿವಾರ ಜಮ್ಮು-ಕಾಶ್ಮೀರದ ವಿವಿಧೆಡೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಪ್ರಿವೆನ್ಶನ್ ಆಫ್​ ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್​ಎ) ಪ್ರಕಾರ ಈ ದಾಳಿಯನ್ನು ನಡೆಸಿರುವುದಾಗಿ ಇಡಿ ಮೂಲಗಳು ತಿಳಿಸಿವೆ.

    ಅನಂತನಾಗ ಜಿಲ್ಲೆಯ ಒಂದು ಕಡೆ, ಶ್ರೀನಗರದ ಆರು ಕಡೆ ಈ ದಾಳಿ ನಡೆದಿತ್ತು. ಮೊಹಮ್ಮದ್​ ಇಬ್ರಾಹಿಂ ಧರ್​ ಗೆ ಸೇರಿದ ಮುರ್ತಾಝ ಎಂಟರ್​ಪ್ರೈಸೆಸ್​, ಆಜಾದ್ ಆಗ್ರೋ ಟ್ರೇಡರ್ಸ್​, ಎಂಆ್ಯಂಡ್ಎಂ ಕಾಟೇಜ್​ ಇಂಡಸ್ಟ್ರೀಸ್​, ಉದ್ಯಮಿ, ಮಧ್ಯವರ್ತಿ ಮೊಹಮ್ಮದ್ ಸುಲ್ತಾನ್ ತೇಲಿ ಅವರಿಗೆ ಸೇರಿದ ಸಂಸ್ಥೆಗಳಲ್ಲಿ ಶೋಧ ಕಾರ್ಯ ನಡೆಯಿತು. ಅಲ್ಲಿದ್ದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ : ಟೆರರ್​ ಫಂಡಿಂಗ್ ಕೇಸ್​- ಉಗ್ರ ಹಫೀಜ್​​ನ ಇಬ್ಬರು ಸಹಚರರನ್ನು ಜೈಲಿಗಟ್ಟಿದ ಪಾಕ್​ ಕೋರ್ಟ್​

    ಜೆ&ಕೆ ಬ್ಯಾಂಕ್​​ನಲ್ಲಿ ನಡೆದಿರುವ ಹಣಕಾಸು ಅಕ್ರಮಕ್ಕೆ ಸಂಬಂಧಿಸಿ ಶ್ರೀನಗರ ಸಿಐಡಿ ಪೊಲೀಸರು ಕೇಸ್​ಗೆ ಸಂಬಂಧಿಸಿ ಎಫ್​ಐಆರ್ ದಾಖಲಿಸಿಕೊಂಡಿದ್ದರು. ಬ್ಯಾಂಕ್​​ನ ಅಧಿಕಾರಿಗಳು, ಗುರುತಿಸಲಾಗದ ಸಾರ್ವಜನಿಕ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು ಮತ್ತು ಇತರರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇದರಂತೆ, ಇಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)

    ಮಿಟೂ ಕೇಸ್ – ಅಕ್ಬರ್ ಮತ್ತು ರಮಣಿ ನಡುವೆ ಸಂಧಾನಕ್ಕೇನಾದರೂ ಅವಕಾಶ ಇದೆಯೇ? – ಕೋರ್ಟ್ ಪ್ರಶ್ನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts