ನವದೆಹಲಿ: ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ ಗ್ರೂಪ್ನ ಬ್ಯಾಂಕ್ ಸಾಲದ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಜಾರಿ ನಿರ್ದೇಶನಾಲಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರ ನಿವಾಸದ ಮೇಲೆ ರೇಡ್ ಮಾಡಿದೆ.
ಅಹ್ಮದ್ ಪಟೇಲ್ ಅವರು ಸೋನಿಯಾ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇ.ಡಿ.ಅಧಿಕಾರಿಗಳು ಅಹ್ಮದ್ ಪಟೇಲ್ ಮನೆಗೆ ತೆರಳಿದ್ದು, ಅವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪನಿ ಬ್ಯಾಂಕ್ಗಳಿಂದ ಪಡೆದ ಸಾಲವನ್ನು ವಾಪಸ್ ಕೊಡದೆ ವಂಚನೆ ಮಾಡಿದ ಪ್ರಕರಣ ಇದಾಗಿದೆ. ಈ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅಹ್ಮದ್ ಪಟೇಲ್ ಅವರ ಹೆಸರೂ ಥಳುಕು ಹಾಕಿಕೊಂಡಿದ್ದು, ಇದೀಗ ಇ.ಡಿ.ಅಧಿಕಾರಿಗಳು ವಿಚಾರಣೆಗೆ ಮುಂದಾಗಿದ್ದಾರೆ. ಈ ಹಿಂದೆ ಅನಾರೋಗ್ಯದ ಕಾರಣ ಹೇಳಿ ಪಟೇಲ್ ತನಿಖೆಯಿಂದ ತಪ್ಪಿಸಿಕೊಂಡಿದ್ದರು. ಇದನ್ನೂ ಓದಿ: ಕರೊನಿಲ್ ತಡೆಗೆ ಆಯುಷ್ ಇಲಾಖೆ ತಜ್ಞರ ಸಮಿತಿಯಲ್ಲಿರುವ ಮುಸ್ಲಿಮರು ಕಾರಣ? ಇಲ್ಲಿದೆ ನೋಡಿ ವಾಸ್ತವ !
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಹ್ಮದ್ ಪಟೇಲ್ ಅವರ ಪುತ್ರ ಮತ್ತು ಅಳಿಯನನ್ನು ವಿಚಾರಣೆ ಮಾಡಿದ್ದಾರೆ. ಅವರು ತಮಗೆ ಸ್ಟರ್ಲಿಂಗ್ ಬಯೋಟೆಕ್ನ ವಂಚನೆಗೆ ಸಂಬಂಧಪಟ್ಟ ಪ್ರಮುಖ ಆರೋಪಿ ನಿತಿನ್ ಸಂದೇಸಾರಾ ಪರಿಚಯ ಇದ್ದಾರೆ ಎಂಬುದನ್ನು ಹೇಳಿದ್ದರು.
ಸಂದೇಸಾರಾ ಗ್ರೂಪ್ನ ಬಯೋಟೆಕ್ ಕಂಪನಿಯ ಹಗರಣ, ನೀರವ್ ಮೋದಿಯ ಪಿಎನ್ಬಿ ಹಗರಣಕ್ಕಿಂತ ತುಂಬ ದೊಡ್ಡದು ಎಂದು ಇ.ಡಿ. ಕಳೆದ ವರ್ಷ ಹೇಳಿತ್ತು. ಸ್ಟರ್ಲಿಂಗ್ ಬಯೋಟೆಕ್ ಲಿಮಿಟೆಡ್ನಿಂದ ಭಾರತೀಯ ಬ್ಯಾಂಕ್ಗಳಿಗೆ ಸುಮಾರು 14,500 ಕೋಟಿ ರೂ.ಗೂ ಹೆಚ್ಚು ವಂಚನೆಯಾಗಿದೆ ಎಂದು ಹಗರಣದ ತನಿಖೆ ವೇಳೆ ಕಂಪನಿಯ ಪ್ರಮೋಟರ್ಗಳಾದ ನಿತಿನ್ ಸಂದೇಸಾರಾ, ಚೇತನ್ ಸಂದೇಸಾರಾ ಮತ್ತು ದೀಪ್ತಿ ಸಂದೇಸಾರಾ ಅವರೇ ಬಹಿರಂಗ ಪಡಿಸಿದ್ದಾರೆ. ಇದು ನೀರವ್ ಮೋದಿ ವಂಚನೆಯ ಮೊತ್ತವಾದ 11,400 ಕೋಟಿ ರೂ.ಗಿಂತಲೂ ಹೆಚ್ಚು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊವಿಡ್-19 ವಿರುದ್ಧ ಹೋರಾಟದಲ್ಲಿ ಸೋತು, ಶರಣಾಗಿದ್ದಾರೆ ಪ್ರಧಾನಿ ಮೋದಿ: ರಾಹುಲ್ ಗಾಂಧಿ
2017ರಲ್ಲಿ ಸಂದೇಸಾರಾ ಗ್ರೂಪ್ನ ಓರ್ವ ನೌಕರನನ್ನು ಇ.ಡಿ. ಬಂಧಿಸಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆತನ ಹೇಳಿಕೆಗಳನ್ನು ಪಡೆದುಕೊಂಡಿತ್ತು. ತಾನು ಭಾರಿ ಮೊತ್ತದ ನಗದು ತೆಗೆದುಕೊಂಡು ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಪುತ್ತ ಮತ್ತು ಅಳಿಯನ ನಿವಾಸಕ್ಕೆ ಹೋಗಿದ್ದೆ ಎಂಬುದನ್ನು ಆ ನೌಕರ ತಿಳಿಸಿದ್ದ. ಇದನ್ನೂ ಓದಿ:
ಸದ್ಯ ಅಹ್ಮದ್ ಪಟೇಲ್ ಅವರು ತಮ್ಮ ವಿರುದ್ಧ ಕೇಳಿಬಂದ ಆರೋಪವನ್ನು ತಳ್ಳಿ ಹಾಕಿದ್ದಾರೆ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ನನಗೂ, ಈ ಪ್ರಕರಣಕ್ಕೂ ಸಂಬಂದ ಇಲ್ಲ ಎಂದಿದ್ದಾರೆ. (ಏಜೆನ್ಸೀಸ್)
16ರ ಬಾಲಕಿಗೆ ಲವ್ ಲೆಟರ್ ಕೊಟ್ಟ 66ರ ವೃದ್ಧ: ಎಚ್ಚರಿಸಿದ್ರೂ ಸುಮ್ಮನಾಗದ ಆತ ಮಾಡಿದ್ದೇನು?