ಕೋಲಾರ: ದುನಿಯಾ ವಿಜಯ್ ನಟನೆಯ ಭೀಮ ಚಿತ್ರದ ಲೊಕೇಷನ್ ಹುಡುಕಾಟದಲ್ಲಿದ್ದ ಚಿತ್ರತಂಡ ಶ್ರೀ ಕ್ಷೇತ್ರ ಕೈವಾರ ತಾತಯ್ಯ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆಯನ್ನು ಸೋಮವಾರ ನೆರವೇರಿಸಿದೆ.
ಆಟೋದಲ್ಲೇ ಕ್ಷೇತ್ರಕ್ಕೆ ದುನಿಯಾ ವಿಜಯ್ ಆಗಮಿಸಿದರು. ಇನ್ನೂ ಈ ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. ಸದ್ಯ ಲೊಕೇಷನ್ ಹುಡುಕಾಟವನ್ನು ಮುಗಿಸಿದೆ.
ಭೀಮ ಪೋಸ್ಟರ್ನಲ್ಲಿ ಈಗಾಗಲೇ ದುನಿಯಾ ವಿಜಯ್ ಅವರ ಲುಕ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಏಪ್ರಿಲ್ 18 ರಂದು ಗವಿಪುರದ ಬಂಡಿ ಮಹಾಕಾಳಿ ದೇಗುಲದಲ್ಲಿ ಅದ್ಧೂರಿ ಮುಹೂರ್ತ ನಡೆಯಲಿದೆ.ಈ ಚಿತ್ರಕ್ಕೆ ನಿರ್ದೇಶಕ ವಿಜಯ್ಗೆ ಸಂಭಾಷಣೆಕಾರರಾಗಿ ಮಾಸ್ತಿ ಸಾಥ್ ನೀಡಿದ್ದಾರೆ.