More

    ದುಲೀಪ್​ ಟ್ರೋಫಿ ಗೆಲುವಿನ ಬೆನ್ನಲ್ಲೇ ಹನುಮ ವಿಹಾರಿಗೆ ಗುಡ್​ನ್ಯೂಸ್​!

    ನವದೆಹಲಿ: ಸದ್ಯ ಭಾರತ ಟೆಸ್ಟ್​ ತಂಡದಿಂದ ಹೊರಗಿರುವ ಬ್ಯಾಟರ್​ ಹನುಮ ವಿಹಾರಿ ದಣ ವಲಯ ತಂಡದ ನಾಯಕರಾಗಿ ಹಾಲಿ ದೇಶೀಯ ಕ್ರಿಕೆಟ್​ ಋತುವಿನ ಮೊದಲ ಟೂರ್ನಿಯಾದ ದುಲೀಪ್​ ಟ್ರೋಫಿಯಲ್ಲಿ ಪ್ರಶಸ್ತಿ ಗೆಲುವು ಕಂಡ ಬೆನ್ನಲ್ಲೇ ಮತ್ತೊಂದು ಗುಡ್​ನ್ಯೂಸ್​ ಪಡೆದುಕೊಂಡಿದ್ದಾರೆ. ಪತ್ನಿ ಪ್ರೀತಿ ರಾಜ್​ ಗಂಡು ಮಗುವಿಗೆ ಜನ್ಮ ನೀಡಿರುವ ವಿಷಯವನ್ನು ಹನುಮ ವಿಹಾರಿ ಸೋಮವಾರ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ದಣ ವಲಯ ತಂಡದ ನಾಯಕರಾಗಿ ಬೆಂಗಳೂರಿನಲ್ಲಿ ದುಲೀಪ್​ ಟ್ರೋಫಿಯಲ್ಲಿ ಆಡುತ್ತಿದ್ದ ನಡುವೆ 10 ದಿನಗಳ ಹಿಂದೆ ಅಂದರೆ ಜುಲೈ 7ರಂದೇ ಪತ್ನಿ ಪ್ರೀತಿ ರಾಜ್​ ಮಗುವಿಗೆ ಜನ್ಮ ನೀಡಿದ್ದಾರೆ ಎಂದೂ ಹನುಮ ವಿಹಾರಿ ಬಹಿರಂಗಪಡಿಸಿದ್ದಾರೆ. ದುಲೀಪ್​ ಟ್ರೋಫಿಯಲ್ಲಿ ಆಡುತ್ತಿದ್ದ ಕಾರಣ ಅವರು ಮಗುವನ್ನು ನೋಡುವುದು ಮತ್ತು ಮಗುವಿನ ಜನನವನ್ನು ಪ್ರಕಟಿಸುವುದು ಕೂಡ ವಿಳಂಬಗೊಂಡಿದೆ.

    “ಇವನ್​ ಕಿಶ್​’ ಎಂದು ಮಗುವಿನ ಹೆಸರನ್ನೂ ಹನುಮ ವಿಹಾರಿ ಪ್ರಕಟಿಸಿದ್ದಾರೆ. ಅವರ ಪೋಸ್ಟ್​ಗೆ ಪ್ರತಿಯಾಗಿ ಭಾರತ ಟೆಸ್ಟ್​ ತಂಡದ ನಾಯಕ ಅಜಿಂಕ್ಯ ರಹಾನೆ ಮತ್ತು ಅವರ ಪತ್ನಿ ರಾಧಿಕಾ ಅಭಿನಂದನೆ ಹೇಳಿ ಕಮೆಂಟ್​ ಹಾಕಿದ್ದಾರೆ.

    ಭಾರತ ಪರ 16 ಟೆಸ್ಟ್​ ಆಡಿರುವ ವಿಹಾರಿ, ಕಳೆದ ವರ್ಷ ಕೊನೇ ಟೆಸ್ಟ್​ ಆಡಿದ್ದರು. ಅಜಿಂಕ್ಯ ರಹಾನೆ ಪುನರಾಗಮನ ತನಗೆ ಸ್ಫೂರ್ತಿ ಎಂದೂ ವಿಹಾರಿ ಇತ್ತೀಚೆಗೆ ಹೇಳಿಕೊಂಡಿದ್ದರು. “ನನಗೆ ಈಗ 29 ವರ್ಷವಷ್ಟೇ. ರಹಾನೆ ಅವರು 35ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಮರಳಿದ್ದಾರೆ. ಹೀಗಿರುವಾಗ ನನಗಿನ್ನೂ ಸಾಕಷ್ಟು ಸಮಯವಿದೆ. ದೇಶೀಯ ಕ್ರಿಕೆಟ್​ನಲ್ಲಿ ಉತ್ತಮವಾಗಿ ಆಡಿದರೆ ಖಂಡಿತವಾಗಿಯೂ ಮತ್ತೆ ಅವಕಾಶ ಸಿಗುತ್ತದೆ’ ಎಂದು ವಿಹಾರಿ ವಿಶ್ವಾಸ ವ್ಯಕ್ತಪಡಿಸಿದ್ದರು.

    ಆರ್​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​ ವಿರುದ್ಧ ಯಜುವೇಂದ್ರ ಚಾಹಲ್​ ಅಸಮಾಧಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts