ಬಾಗಲಕೋಟೆ: ಮದ್ಯಪಾನ ಮಾಡಿದ ಬಳಿಕ ಅದರ ಅಮಲಿನಲ್ಲಿ ಏನೇನೋ ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ ಪ್ರಕರಣಗಳು ಹಲವಾರು ಇವೆ. ಅಂಥದ್ದೇ ಒಂದು ಪ್ರಕರಣ ರಾಜ್ಯದಲ್ಲಿ ಇನ್ನೊಂದು ನಡೆದಿದೆ.
ಬಾಗಲಕೋಟೆ ತಾಲೂಕಿನ ಮುರನಾಳ ಪುನರ್ ವಸತಿ ಕೇಂದ್ರದ ಕೆರೆಯಲ್ಲಿ ಈ ಪ್ರಕರಣ ನಡೆದಿದೆ. ಮದ್ಯಪಾನ ಮಾಡಿದ್ದ ಮೌಲಾಸಾಬ್ ವಾಲೀಕಾರ ಎಂಬಾತ ಮದ್ಯದ ಅಮಲಿನಲ್ಲಿ ದುಸ್ಸಾಹಸಕ್ಕೆ ಇಳಿದು ಎಡವಟ್ಟು ಮಾಡಿಕೊಂಡಿದ್ದಾನೆ.
ಕಳೆದ ನಾಲ್ಕೈದು ದಿನಗಳಿಂದ ಗ್ರಾಮದ ಈ ಕೆರೆಯಲ್ಲಿ ಕಂಡುಬಂದಿರುವ ಮೊಸಳೆಯನ್ನು ನೋಡಲು ಜನರು ಮುಗಿಬಿದ್ದಿದ್ದರು. ಆ ಜಾಗಕ್ಕೆ ಕಂಠಪೂರ್ತಿ ಕುಡಿದಿದ್ದ ಮೌಲಾಸಾಬ್ ಕೂಡ ಬಂದಿದ್ದು, ಮೊಸಳೆ ಹಿಡಿಯುವುದಾಗಿ ಹೇಳಿ ಮದ್ಯದ ನಶೆಯಲ್ಲಿ ಕೆರೆಗೆ ಧುಮುಕಿದ್ದಾನೆ.
ಹೀಗೆ ಕೆರೆಯ ಮಧ್ಯಕ್ಕೆ ಹೋದ ಮೌಲಾಸಾಬ್ ಈಜಲಾಗದೆ ನೀರಿನಲ್ಲಿ ಮುಳುಗಲಾರಂಭಿಸಿದ್ದ. ಇದನ್ನು ಗಮನಿಸಿದ ಸ್ಥಳೀಯರು ಕೆರೆಗೆ ಧುಮುಕಿ ಮೌಲಾಸಾಬ್ನನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಮದ್ಯದ ಅಮಲಿನಲ್ಲಿ ಎಡವಟ್ಟು ಮಾಡಿಕೊಂಡು ಈತ ನೆರೆದಿದ್ದ ಜನರ ಎದುರು ಮುಖಭಂಗ ಎದುರಿಸುವಂತಾಗಿತ್ತು.
‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್ನೋಟ್ನಲ್ಲಿತ್ತು ಈ ಕೊನೇ ಆಸೆ