ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಪ್ರಕರಣ ಸಂಬಂಧ ಇಷ್ಟು ದಿನ ನಟಿ ಸಂಜನಾ ಗಲ್ರಾನಿ ಅಲಿಯಾಸ್ ಮಹಿರಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ದಿನಕ್ಕೊಂದು ಗಂಭೀರ ಆರೋಪ ಮಾಡುತ್ತಿದ್ದರು. ಇದೀಗ ಖ್ಯಾತ ನಿರೂಪಕಿ ಅನುಶ್ರೀ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.
ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಅನುಶ್ರೀ ಇತ್ತೀಚಿಗಷ್ಟೇ ಸಿಸಿಬಿ ವಿಚಾರಣೆ ಎದುರಿಸಿದ್ದರು. ‘ಸಿಸಿಬಿ ವಿಚಾರಣೆ ನಡೆಸಿದ್ದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿಯಂತಲ್ಲ. ಈ ವಿಚಾರವಾಗಿ ನನ್ನನ್ನು ಬಿಂಬಿಸಿದ ರೀತಿ ಮನಸ್ಸಿಗೆ ತುಂಬಾ ನೋವು ಉಂಟು ಮಾಡಿದೆ…’ ಎಂದು ಕಣ್ಣೀರು ಹಾಕುತ್ತ ಅನುಶ್ರೀ ಮಾತನಾಡಿದ್ದ ವಿಡಿಯೋ ತುಣುಕನ್ನು ಶುಕ್ರವಾರ ಬೆಳಗ್ಗೆ ತನ್ನ ಫೇಸ್ಬುಕ್ ಪೇಜ್ನಲ್ಲಿ ಅಪ್ಲೋಡ್ ಮಾಡಿದ್ದರು. ಇದರ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಸಂಬರಗಿ, ”ಇಲ್ಲಿಯವರೆಗೆ ಅನುಶ್ರೀಯನ್ನು ಅರೆಸ್ಟ್ ಆಗದಂತೆ ಶುಗರ್ ಡ್ಯಾಡಿ ತಡೆದಿದ್ದಾರೆ. ಇನ್ಮುಂದೆ ಅದೆಲ್ಲ ನಡೆಯೋದಿಲ್ಲ. ಆಕೆಯ ತಪ್ಪಿಗೆ ಕೆಲವೇ ದಿನಗಳಲ್ಲಿ ಶಿಕ್ಷೆಯಾಗುವುದು ನಿಶ್ಚಿತ. ಅನುಶ್ರೀಯ ಮತ್ತಷ್ಟು ರಹಸ್ಯಗಳು ಹೊರಬರಲಿವೆ” ಎಂದಿದ್ದಾರೆ. ಇದೀಗ ಈ ಶುಗರ್ ಡ್ಯಾಡಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿರಿ ಕಣ್ಣೀರಿಟ್ಟ ಅನುಶ್ರೀಗೆ ‘ನಿಮ್ಮ ಜೊತೆ ನಾವಿದ್ದೇವೆ, ಧೈರ್ಯವಾಗಿರಿ’ ಎಂದ ಮತ್ತೊಬ್ಬ ನಟಿ
”ಶುಗರ್ ಡ್ಯಾಡಿ ಅಂದ್ರೆ ಹಣ, ದುಬಾರಿ ವಸ್ತು ಅಥವಾ ಇತರ ಉಡುಗೊರೆ ಕೊಟ್ಟು ಅದಕ್ಕೆ ಪ್ರತಿಯಾಗಿ ಯುವತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಹಿರಿಯ ವಯಸ್ಸಿನ ವ್ಯಕ್ತಿ” ಎಂಬ ಪದದ ಅರ್ಥವನ್ನು ಸಂಬರಗಿಯೇ ಟ್ವೀಟ್ ಮಾಡಿದ್ದಾರೆ.
Her sugar daddy has managed to prevent her arrest till now. Not any longer. It is only a matter of time before she gets what she deserves. More skeletons will tumble out of her cupboards.#SandalwoodDrugScandal #tv #anchoranushree #anchor #kannada
— Veera Indian Prashanth Sambargi (@vip_sambaragi) October 2, 2020
”ಅನುಶ್ರೀ ‘ರಿಂಗ್ ಮಾಸ್ಟರ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಬಗ್ಗೆಯೂ ಪ್ರಸ್ತಾಪಿಸಿರುವ ಪ್ರಶಾಂತ್ ಸಂಬರಗಿ, ‘ಈ ಸಿನಿಮಾದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ಅನುಶ್ರೀ ಮತ್ತು ಅವರ ಸ್ನೇಹಿತರು ಡ್ರಗ್ಸ್ ಪೆಡ್ಲರ್ಗೆ ಕರೆ ಮಾಡುತ್ತಾರೆ. ಆಗ ಆತನ ನಿಜ ಬಣ್ಣ ಬಯಲಾಗುತ್ತದೆ. ಸಿನಿಮಾದಂತೆ ಅನುಶ್ರೀ ನಿಜ ಜೀವನವೂ ಇದೆ” ಎಂದು ಆರೋಪಿಸಿದ್ದಾರೆ.
In the #Kannada #movie #Ringmaster, #Anushree & friends call a #drug peddler to celebrate New Year's party.Things go out of hand when the drug peddler shows his real face. Does art imitate life or life imitates movies? Ringmaster itself was a copy of Thai film Countdown.#ccb pic.twitter.com/gJbQ9ng6Ye
— Veera Indian Prashanth Sambargi (@vip_sambaragi) October 2, 2020
ಸಿಸಿಬಿ ನೋಟಿಸ್ ಬರುತ್ತಿದ್ದಂತೆ ರಾಜ್ಯದ ಮೂವರು ಪ್ರಭಾವಿ ನಾಯಕರಿಗೆ ಅನುಶ್ರೀ ಕರೆ ಮಾಡಿದ್ದರು!
ನನ್ನ ಮಗನ ಫೋಟೋ-ಹೆಸರು ಬಳಸಿದ್ರೆ ಬೆಂಕಿ ಹಚ್ಚಿಸ್ತೀನಿ: ಸೊಸೆ ವಿರುದ್ಧ ಸಿಡಿದೆದ್ದ ಡಿ.ಕೆ. ರವಿ ತಾಯಿ