More

    ಚಾಲನೆ ಪ್ರಾತ್ಯಕ್ಷಿಕೆ ನೀಡುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ನುಗ್ಗಿತು

    ಉತ್ತರ ಕನ್ನಡ : ಸಾರಿಗೆ ಅಧಿಕಾರಿ ಎದುರು ಚಾಲನೆಯ ಪ್ರಾತ್ಯಕ್ಷಿಕೆ ನೀಡುತ್ತಿದ್ದ ಕಾರು ಏಕಾಏಕಿ ಕೆರೆಗೆ ನುಗ್ಗಿದ ಘಟನೆ ಶಿರಸಿ ಪ್ರಾದೇಶಿಕ ಸಾರಿಗೆ ಇಲಾಖೆ ಬಳಿ ಗುರುವಾರ ನಡೆದಿದೆ.

    ಆರ್​ಟಿಒ ಕಚೇರಿ ಬಳಿ ಇರುವ ಬಶೆಟ್ಟಿ ಕೆರೆಗೆ ಕಾರು ನುಗ್ಗಿದ್ದು, ಚಾಲಕ ಅಪಾಯದಿಂದ ಪರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
    ಪವನ್​ ಎಂಬುವವರು ಚಾಲನ ಪರವಾನಗಿ ಪಡೆಯಲು ಸಾರಿಗೆ ಅಧಿಕಾರಿ ಎದುರು ಕಾರು ಚಾಲನೆ ಮಾಡುತ್ತಿದ್ದರು. ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿದ್ದ ಕೆರೆಗೆ ನುಗ್ಗಿತು. ಕೆರೆಯಲ್ಲಿ ನೀರು ಸಂಗ್ರಹವಾಗಿದ್ದರಿಂದ ಕಾರು ನೀರಿನಲ್ಲಿ ಮುಳುಗಿತು. ಸ್ಥಳದಲ್ಲಿದ್ದ ಯುವಕರು ಕೆರೆಗೆ ಇಳಿದು ಚಾಲಕನನ್ನು ರಕ್ಷಣೆ ಮಾಡಿದರು. ಶಿರಸಿ ಪೊಲೀಸರು ಕೇಸು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ನನ್ ಕೋಳಿ ಕೊಡಲ್ಲ. ನಿಮ್ ಕೈ ಮುಗೀತೀನಿ ಬಿಟ್ಬಿಡಿ..!: ಮೈಸೂರಿನಲ್ಲಿ ಮಹಿಳೆಯ ಅಳಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts