More

    ಚಾಲಕನ ನಿಯಂತ್ರಣ ತಪ್ಪಿ ಸರ್ವೀಸ್​ ರಸ್ತೆಗೆ ನುಗ್ಗಿದ ಕಂಟೇನರ್​; ತಪ್ಪಿತು ಬಾರಿ ಅನಾಹುತ

    ರಾಮನಗರ: ಬಹುಶಃ ಮಟಮಟ ಮಧ್ಯಾಹ್ನವಾದ ಕಾರಣ ಯಮರಾಜ ವಿಶ್ರಾಂತಿ ಪಡೆದಿದ್ದ ಅನಿಸುತ್ತದೆ. ಈ ಕಾರಣದಿಂದ ಘೋರ ದುರಂತವೊಂದು ತಪ್ಪಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಬುಧವಾರ ನಡೆದಿದೆ.

    ಮೈಸೂರು ಕಡೆಯಿಂದ ಬೆಂಗಳೂರಿನತ್ತ ವೇಗವಾಗಿ ಬರುತ್ತಿದ್ದ ಕಂಟೇನರ್​ ಲಾರಿಯೊಂದು ಚಾಲಕನನ ನಿಯಂತ್ರಣ ತಪ್ಪಿ ಪಕ್ಕದ ರಸ್ತೆ ದಾಟಿ ಸರ್ವೀಸ್​ ರೋಡ್​ಗೆ ನುಗ್ಗಿರುವ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೈರಾಪಟ್ಟಣ ಸಮೀಪದ ಸಂಕಲಗೆರೆ ಗೇಟ್ ಬಳಿ ನಡೆದಿದೆ.

    Truck Accident

    ಇದನ್ನೂ ಓದಿ: ನಟ, ನಿರೂಪಕ ಮಾಸ್ಟರ್​ ಆನಂದ್​ ಪುತ್ರಿ ವಂಶಿಕ ಹೆಸರಿನಲ್ಲಿ ವಂಚನೆ

    ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕು ಸಾಗಾಣಿಕೆ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ, ಚನ್ನಪಟ್ಟಣ ತಾಲೂಕಿನ ಸಂಕಲಗೆರೆ ಗೇಟ್ ಬಳಿ ರಸ್ತೆ ವಿಭಜಕವನ್ನು ದಾಟಿ ಸರ್ವೀಸ್​ ರಸ್ತೆಗೆ ನುಗ್ಗಿದೆ. ಸಮೀಪ ಇದ್ದ ಅಂಗಡಿಯೊಂದರ ಸಿಸಿಟಿವಿಯಲ್ಲಿ ಘೋರ ದೃಶ್ಯ ಸೆರೆಯಾಗಿದೆ.

    ಅದೃಷ್ಟವಶಾತ್ ಈ ಸಮಯದಲ್ಲಿ ಯಾವುದೇ ವಾಹನಗಳು ಬಾರದ ಹಿನ್ನೆಲೆಯಲ್ಲಿ ಘೋರ ದುರಂತ ತಪ್ಪಿದಂತಾಗಿದೆ. ವಾಹನ ಎಡಭಾಗದಿಂದ ಬಲಭಾಗಕ್ಕೆ ರಭಸದಿಂದ ನುಗ್ಗಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts