ಮಂಡ್ಯ: ಕನ್ನಡ ಚಿತ್ರರಂಗಕ್ಕೆ ವರನಟ ಡಾ.ರಾಜ್ಕುಮಾರ್ ಕೊಡುಗೆ ಅಪಾರ ಎಂದು ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಜಿ.ಟಿ.ರವೀಂದ್ರಕುಮಾರ್ ಹೇಳಿದರು.
ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ ಹಾಗೂ ಜಿಲ್ಲಾ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಡಾ.ರಾಜ್ಕುಮಾರ್ ಅವರ 95ನೇ ಜನ್ಮದಿನದಲ್ಲಿ ಮಾತನಾಡಿದರು. ಗೋಕಾಕ್ ಚಳವಳಿಯಂತಹ ದೊಡ್ಡ ಕನ್ನಡಪರ ಚಳವಳಿಯನ್ನು ಮಾಡಿ ಕನ್ನಡಿಗರ ಎದೆಯಲ್ಲಿ ಕನ್ನಡತನವನ್ನು ಎಚ್ಚರಿಸಿದವರು. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜ್ಕುಮಾರ ಅವರ ಜನ್ಮದಿನವನ್ನು ಸರಳವಾಗಿ ಆಚರಿಸಲಾಗಿದೆ. ಮುಂದಿನ ವರ್ಷ ವಿಜೃಂಭಣೆಯಿಂದ ಮಾಡಲಾಗುವುದು ಎಂದರು.
ಅಭಿಮಾನಿಗಳಾದ ಡಿ.ಸುರೇಶ್ ಬಾಬು, ಪ್ರವೀಣ್ ಕುಮಾರ್, ಆನಂದ್ ಹಾಜರಿದ್ದರು.