More

    ‘ವಿಜಯವಾಣಿ’ ಕೇವಲ ನನ್ನ ಮನೆಯ ಪತ್ರಿಕೆ ಅಲ್ಲ, ಮನಸ್ಸಿನ ಪತ್ರಿಕೆ: ನಟಿ ತಾರಾ ಅನುರಾಧ

    ಬೆಂಗಳೂರು: ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರುವ ‘ನನ್ನಮ್ಮ ಸೂಪರ್​ಸ್ಟಾರ್’​ ಅಂತಿಮ ಘಟ್ಟವನ್ನು ತಲುಪಿದ್ದು, ಯಾರು ವಿಜೇತರಾಗಿ ಹೊರಹೊಮ್ಮಲಿದ್ದಾರೆ ಎಂಬ ಪ್ರಶ್ನೆ ಸದ್ಯ ವೀಕ್ಷಕರಲ್ಲಿ ಮೂಡಿದೆ. ಇನ್ನು ಈ ಮಧ್ಯೆ ನನ್ನಮ್ಮ ಸೂಪರ್​​ಸ್ಟಾರ್​ ಚಿತ್ರೀಕರಣದ ಸೆಟ್​ಗೆ ದಿಢೀರ್​ ಭೇಟಿ ಕೊಟ್ಟ ವಿಜಯವಾಣಿ ತಂಡ, ಕಾರ್ಯಕ್ರಮದ ತೀರ್ಪುಗಾರರಾದ, ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧ ಅವರನ್ನು ಮಾತನಾಡಿಸಿತು. ಈ ವೇಳೆ ಅವರು ಹಂಚಿಕೊಂಡ ಕೆಲವು ಮನದಾಳದ ಮಾತುಗಳು ಹೀಗಿವೆ.

    ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ, ಯೆಲ್ಲೋ ಅಲರ್ಟ್​ ಘೋಷಣೆ

    “ನನಗೆ ಮತ್ತೊಂದು ಹೆಸರು ಕೊಟ್ಟಿದ್ದು, ಈ ಕಾರ್ಯಕ್ರಮ. ಈಗಂತೂ ಎಲ್ಲರೂ ನನ್ನನ್ನು ತಾರಾ, ತಾರಾ ಅನುರಾಧ ಅಂತ ಕರೆಯುವುದನ್ನೇ ಬಿಟ್ಟಿದ್ದಾರೆ. ಅದರ ಬದಲಿಗೆ ತಾರಮ್ಮ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಅದು ನನಗೆ ಬಹಳ ಸಂತೋಷ ಉಂಟುಮಾಡಿದೆ. ಒಬ್ಬರನ್ನು ಜಡ್ಜ್​ ಮಾಡುವುದೇ ಕಷ್ಟಕರ. ಅದರಲ್ಲೂ ಜಡ್ಜ್​ ಸ್ಥಾನದಲ್ಲಿ ಕೂತು ಹೇಳುವುದು ಬಹಳ ಕಷ್ಟ” ಎಂದು ಹೇಳಿದರು.

    “ವಿಜಯವಾಣಿ ಪತ್ರಿಕೆ ಆರಂಭವಾದ ದಿನದಿಂದಲೂ ನಾನು ಅವರ ಜತೆ ಇದ್ದೀನಿ, ಅವರು ನನ್ನೊಟ್ಟಿಗೆ ಇದ್ದಾರೆ. ಇದು ಕೇವಲ ನನ್ನ ಮನೆಯ ಪತ್ರಿಕೆ ಮಾತ್ರವಲ್ಲ, ನನ್ನ ಮನಸ್ಸಿನ ಪತ್ರಿಕೆ. ಆ ಪತ್ರಿಕೆಯವರು ಇವತ್ತು ನನ್ನ ಮಾತನಾಡಿಸಲು ಬಂದದ್ದು, ನಿಜಕ್ಕೂ ನನ್ನ ತವರು ಮನೆಯಿಂದಲೇ ಯಾರೋ ಒಬ್ಬರು ಬಂದಷ್ಟೇ ಖುಷಿಯಾಯಿತು” ಎಂದು ಸಂತಸ ಹಂಚಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts