More

    ಗುಂಡ್ಲುಪೇಟೆಯಲ್ಲಿ ಆಕರ್ಷಿಸಿದ ಶ್ವಾನಮೇಳ

    ಗುಂಡ್ಲುಪೇಟೆ: ನಾಯಿ ಮತ್ತು ಮಾನವರ ಬಾಂಧವ್ಯ ಅಪೂರ್ವವಾಗಿದ್ದು, ತಮಗೆ ಅನ್ನ ಹಾಕಿದವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.

    ಪಟ್ಟಣದಲ್ಲಿ ಪಶುಪಾಲನಾ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಶ್ವಾನ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಪಟ್ಟಣದಲ್ಲಿ ಬಹುತೇಕ ಜನರು ನಾಯಿಗಳನ್ನು ಸಾಕುತ್ತಿದ್ದಾರೆ. ಆದರೆ ಅವುಗಳಿಗೆ ಸಮರ್ಪಕ ಸ್ಥಳಾವಕಾಶ ನೀಡದೆ ಹಿಂಸೆ ನೀಡಲಾಗುತ್ತಿದೆ. ಅವುಗಳನ್ನು ವಿಶಾಲ ಸ್ಥಳದಲ್ಲಿ ಸಾಕಬೇಕು. ಕಾಲಕಾಲಕ್ಕೆ ವ್ಯಾಕ್ಸಿನ್ ಹಾಗೂ ಚಿಕಿತ್ಸೆ ಕೊಡಿಸಿ ಜೋಪಾನ ಮಾಡಬೇಕು ಎಂದು ಹೇಳಿದರು.

    ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಹನುಮೇಗೌಡ ಮಾತನಾಡಿ, ಶ್ವಾನಮೇಳದಲ್ಲಿ 38 ಆಸಕ್ತರು ತಮ್ಮಲ್ಲಿ ಸಾಕಿರುವ 9 ತಳಿಯ ನಾಯಿಗಳನ್ನು ಕರೆ ತಂದಿದ್ದಾರೆ. ಪ್ರತಿ ತಳಿಗೂ ಮೊದಲ ಹಾಗೂ ಎರಡನೇ ಬಹುಮಾನ ನೀಡಿ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದು ಹೇಳಿದರು.
    ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್, ಡಾ.ಮಾದೇಶ್, ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ಪುರಸಭೆ ಸದಸ್ಯರಾದ ಮಧು, ಅಣ್ಣಯ್ಯಸ್ವಾಮಿ, ರಾಜಗೋಪಾಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts