More

    ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

    ಮುಂಬೈ: ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಕೋವಿಡ್​ ಕಾರಣದಿಂದ ಸಾವನ್ನಪ್ಪಿ 24 ಗಂಟೆಗಳಲ್ಲೇ ಆಕೆಯ ಸಾವಿನ ಸುತ್ತ ಅನೇಕ ಅನುಮಾನಗಳು ಆರಂಭವಾಗಿವೆ. ನಟಿಯ ಸಾವಿಗೆ ಪರೋಕ್ಷವಾಗಿ ಪತಿ ಗಗನ್​ ಕಾರಣ ಎಂದು ಅನೇಕರು ಆರೋಪಿಸಲಾರಂಭಿಸಿದ್ದಾರೆ. ಅದರ ಬೆನ್ನಲ್ಲೇ ನಟಿ ಬರೆದಿಟ್ಟಿದ್ದ ಪತ್ರವೊಂದು ಸಿಕ್ಕಿದ್ದು, ಆಕೆಯ ಆಪ್ತ ಸ್ನೇಹಿತೆಯೂ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿ: ಸ್ನೇಹಿತನ ಬರ್ತ್​ಡೇ ಪಾರ್ಟಿಗೆ ಹೋದವ ಸಮುದ್ರಕ್ಕೆ ಬಿದ್ದ! ಬದುಕುವುದಕ್ಕೆ ಆತ ಮಾಡಿದ್ದೇನು ಗೊತ್ತಾ?

    ದಿವ್ಯಾ, ಗಗನ ಗಬ್ರೂ ಹೆಸರಿನ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಆದರೆ ಮದುವೆಯಾದಾಗಿನಿಂದ ಆತ ನಟಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಲೇ ಬಂದಿದ್ದಾನೆ. ಇದರ ಬಗ್ಗೆ ಯಾರಿಗೂ ಹೇಳಿಕೊಳ್ಳದ ನಟಿ ನವೆಂಬರ್​ 7ರಂದು ತನಗೆ ಗಂಡನಿಂದ ಆಗುತ್ತಿರುವ ತೊಂದರೆಯ ಬಗ್ಗೆ ಪತ್ರ ಬರೆದಿಟ್ಟಿದ್ದಾಳೆ. ನವೆಂಬರ್​ 16ರಂದು ಪೊಲೀಸ್​ ಠಾಣೆಯಲ್ಲಿ ನಾನ್​ ಕಾಂಗ್ಜಿನೇಬಲ್​ (ಎನ್​ಸಿ) ಪ್ರಕರಣ ದಾಖಲಿಸಿ ಬಂದಿದ್ದಾರೆ. ಇದಾದ ನಂತರ ನಟಿಗೆ ಕರೊನಾ ದೃಢವಾಗಿದ್ದು, ಆಕೆ ಸೋಮವಾರ ಮೃತರಾಗಿದ್ದಾರೆ.

    ದಿವ್ಯಾ ಅವರ ಮನೆಯಲ್ಲಿ ಹುಡುಕುವಾಗ ಪತ್ರ ಸಿಕ್ಕಿರುವುದಾಗಿ ಆಕೆಯ ಸಹೋದರ ದೇವಶಿಶ್​ ತಿಳಿಸಿದ್ದಾರೆ. ಅವರ ಜತೆ ದಿವ್ಯಾ ಅವರ ಆಪ್ತ ಸ್ನೇಹಿತೆ ದೇವೊಲೀನಾ ಭಟ್ಟಾಚಾರ್ಜಿ ಕೂಡ ಗಗನ್​ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ದಿವ್ಯಾ ಮದುವೆಯಾದಾಗಿನಿಂದಲೂ ಸಾಕಷ್ಟು ಕಷ್ಟ ಅನುಭವಿಸಿದ್ದಾಳೆ. ಆಕೆ ಗಗನ್​ನನ್ನು ಮದುವೆಯಾಗುವುದು ಆಕೆಯ ಕುಟುಂಬಕ್ಕಾಗಲೀ ಅಥವಾ ನನಗಾಗಲಿ ಇಷ್ಟವಿರಲಿಲ್ಲ. ಆತನ ವಿರುದ್ಧ ಶಿಮ್ಲಾ ಪೊಲೀಸ್​ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಪ್ರಕರಣ ದಾಖಲಾಗಿದೆ. ಆತ 6 ತಿಂಗಳ ಕಾಲ ಜೈಲುವಾಸದಲ್ಲಿದ್ದು ಇದೀಗ ಜಾಮೀನಿನ ಮೇಲೆ ಹೊರಗಿದ್ದಾನೆ. ಆತ ದಿವ್ಯಾಗೆ ಪ್ರತಿದಿನ ಹೊಡೆಯುತ್ತಿದ್ದ. ಅವಳ ಬಳಿ ಇದ್ದ ಚಿನ್ನಾಭರಣವನ್ನೆಲ್ಲವನ್ನೂ ದೋಚಿದ್ದ. ಅವನಿಂದಲೇ ಆಕೆಗೆ ಡಯಾಬಿಟಿಸ್​ ಬಂತು. ಅವನಿಂದ ಸಂಪೂರ್ಣವಾಗಿ ಕುಗ್ಗಿದ್ದ ಅವಳು ಕರೊನಾವನ್ನು ತಡೆಯಲಿಲ್ಲ ಎಂದು ದೆವೊಲೀನಾ ಆರೋಪಿಸಿದ್ದಾರೆ.

    ಇದನ್ನೂ ಓದಿ: ಸ್ನಾನ ಮಾಡುವುದನ್ನು ವಿಡಿಯೋ ಮಾಡಿ, ರೇಪ್​ ಮಾಡಿದ ಕೌನ್ಸಿಲರ್​! ಸ್ನೇಹಿತನಿಂದಲೂ ರೇಪ್​ ಮಾಡಿಸಿದ!

    ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಭಾವನಾತ್ಮಕ ವಿಡಿಯೋ ಹಾಕಿರುವ ಆಕೆ, ಗಗನ್​ ಮತ್ತು ಆತನ ತಾಯಿಯನ್ನು ಜೀವನಪೂರ್ತಿ ಜೈಲಿನಲ್ಲೇ ಇರುವಂತೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆತನ ಜತೆ ಇರುವ ಸ್ನೇಹಿತೆಯರಿಗೆ, ಆತನಿಂದ ದೂರಾಗಿ, ಪ್ರಾಣ ಉಳಿಸಿಕೊಳ್ಳಿ ಎಂದು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

     

    View this post on Instagram

     

    A post shared by Devoleena Bhattacharjee (@devoleena)

    ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

    ಮದುವೆ ಮಂಟಪದಿಂದ ಎದ್ದು ಹೋದ ವಧು! ವಾಪಾಸು ಬರುವಷ್ಟರಲ್ಲಿ ಪೂರ್ತಿ ಕುಟುಂಬವೇ ಹೆಮ್ಮೆ ಪಡುತ್ತಿತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts