More

    ಬಂಕಾಪುರ ಹಿಂದು ಮಹಾಗಣಪತಿ ವಿಸರ್ಜನೆ

    ಬಂಕಾಪುರ: ಪಟ್ಟಣದ ಬಸ್ ನಿಲ್ದಾಣ ಹತ್ತಿರದ ನೆಹರು ಗಾರ್ಡನ್​ನಲ್ಲಿ ಪ್ರತಿಷ್ಠಾಪಿಸಿದ್ದ ಹಿಂದು ಮಹಾಗಣಪತಿಯ ವಿಸರ್ಜನೆ ಸೋಮವಾರ ಅದ್ದೂರಿಯಾಗಿ ಜರುಗಿತು.

    ಅರಳೆಲೆಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಗಣಪತಿ ವಿಸರ್ಜನಾ ಮೆರವಣಿಗೆಗೆ ಚಾಲನೆ ನೀಡಿದರು. ಸಾವಿರಾರು ಹಿಂದು ಕಾರ್ಯಕರ್ತರು ಮೇರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಹಣೆಗೆ ತಿಲಕವಿಟ್ಟು ಕೇಸರಿ ಪಟ್ಟಿ ಕಟ್ಟಿಕೊಂಡಿದ್ದ ಯುವಕರು ಮೆರವಣಿಗೆ ಯುದ್ದಕ್ಕೂ ಗಣೇಶ ಮತ್ತು ಹಿಂದು ಪರ ಘೊಷಣೆ ಮೊಳಗಿಸಿದರು. ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ದೊಡ್ಡ ದೊಡ್ಡ ಕೇಸರಿ ಬಾವುಟಗಳನ್ನು ತಿರುಗಿಸಿ ಸಂಭ್ರಮಪಟ್ಟರು. ತಾಲೂಕು ಹಾಗೂ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡು ಮೆರುಗು ನೀಡಿದರು.

    ವಿವಿಧ ಸಂಘಟನೆಗಳು ಉಪಾಹಾರ, ಊಟ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದರು. ಅಹೋರಾತ್ರಿ ಗುಡ್ಡದಚನ್ನಾಪುರ ಕೆರೆಯಲ್ಲಿ ಗಣಪತಿ ವಿಸರ್ಜಿಸಲಾಗುತ್ತದೆ.

    ಆರ್​ಎಸ್​ಎಸ್ ಮುಖಂಡ ಗಂಗಾಧರ ಮಾಮ್ಲೆಪಟ್ಟಣಶೆಟ್ಟರ, ಬಿಜೆಪಿ ತಾಲೂಕಾಧ್ಯಕ್ಷ ಶಿವಾನಂದ ಮ್ಯಾಗೇರಿ, ಬಸವರಾಜ ನಾರಾಯಣಪುರ, ನರಹರಿ ಕಟ್ಟಿ, ಹೊನ್ನಪ್ಪ ಹೂಗಾರ, ಶಿವಾನಂದ ದೇವಸೂರ, ಸೋಮಶೇಖರ ಗೌರಿಮಠ ಸೇರಿದಂತೆ ಸಾವಿರಾರು ಹಿಂದು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಎಸ್​ಪಿ ಡಾ.ಶಿವಕುಮಾರ ಗುಣಾರೆ, ಡಿಎಸ್​ಪಿ ಜಿ.ಮಂಜುನಾಥ, ಪಿಎಸ್​ಐ ನಿಂಗರಾಜ ಕರಕನ್ನವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts