ಸ್ಯಾಂಡಲ್ವುಡ್ ನಿರ್ದೇಶಕ ಯೋಗರಾಜ್ ಭಟ್ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಒಂದಷ್ಟು ನಿರ್ಮಾಣ, ಮತ್ತೊಂದಿಷ್ಟು ನಿರ್ದೇಶನ. ಅದೆಲ್ಲರ ನಡುವೆ ಒಂದಷ್ಟು ಸಿನಿಮಾಗಳಿಗೆ ಕಥೆ ಬರೆದೂ ಕೊಟ್ಟಿದ್ದಾರೆ. ಈ ಮೂರರಲ್ಲಿ ಕೊನೆಯಲ್ಲಿರುವ ವಿಚಾರಕ್ಕೆ ಬರುವುದಾದರೆ, ಸದ್ದಿಲ್ಲದೆ ಹೊಸ ಕಥೆಯೊಂದನ್ನು ಯೋಗರಾಜ್ ಭಟ್ ಬರೆದಿದ್ದು, ಆ ಚಿತ್ರದಲ್ಲಿ ’ಕವಲುದಾರಿ’ ಸಿನಿಮಾ ಖ್ಯಾತಿಯ ರಿಷಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್ಗೂ ಕರೊನಾ ಪಾಸಿಟಿವ್!
ಹೌದು, ಇಂದು ರಿಷಿ ಜನ್ಮದಿನ. ಆ ಪ್ರಯುಕ್ತ ಚಿತ್ರತಂಡ ರಿಷಿಗೆ ಜನ್ಮದಿನ ಶುಭಾಶಯ ಕೋರಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರವನ್ನು ಮೋಹನ್ ಸಿಂಗ್ ಜಿ ನಿರ್ದೇಶನ ಮಾಡಲಿದ್ದು, ಸ್ಕ್ರೀನ್ ಪ್ಲೇ ಸಹ ಬರೆದಿದ್ದಾರೆ. ಅದರಂತೆ ಕಥೆ ಮತ್ತು ಗೀತರಚನೆ ಯೋಗರಾಜ್ ಭಟ್ ಅವರ ಉಸ್ತುವಾರಿ. ಎಸ್. ವಿ ನಾರಾಯಣ್ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಶೀಘ್ರದಲ್ಲಿ ಶೀರ್ಷಿಕೆಯನ್ನೂ ರಿವೀಲ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಇದನ್ನೂ ಓದಿ: ಸುಶಾಂತ್ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸಲ್ಮಾನ್ ಖಾನ್!; ನೆಟ್ಟಿಗರಿಂದ ಮತ್ತೆ ತರಾಟೆ
ಅಂದಹಾಗೆ, ನಿಮಗೆ ನೆನಪಿರಬಹುದು, ನಿರ್ದೇಶಕ ಯೋಗರಾಜ್ ಭಟ್ ಈ ಹಿಂದೆ ‘ಗಾಳಿಪಟ‘ ಸೀಕ್ವೆಲ್ ಶುರುಮಾಡಿದಾಗ, ಶರಣ್, ಲೂಸಿಯಾ ಪವನ್ಕುಮಾರ್ ಮತ್ತು ರಿಷಿ ಸಹ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಅಧಿಕೃತ ಮಾಡಿದ್ದರು. ಅದಾದ ಬಳಿಕ ತಾರಾಗಣದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದ ನಿರ್ದೇಶಕರು, ಹಳೇ ತಂಡಕ್ಕೆ ಮಣೆ ಹಾಕಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್ ಅವರನ್ನು ಮರಳಿ ಕರೆತಂದಿದ್ದರು.
ಇದೀಗ ಮತ್ತೆ ರಿಷಿ ಸಿನಿಮಾಕ್ಕೆ ಯೋಗರಾಜ್ ಭಟ್ ಕಥೆ ಬರೆದಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಕರೊನಾ ಸ್ಥಿತಿಗತಿ ನೋಡಿಕೊಂಡು, ಶೂಟಿಂಗ್ಗೆ ತಯಾರಿ ಮಾಡಿಕೊಳ್ಳಲಿದ್ದಾರೆ ನಿರ್ದೇಶಕರು. ತಾರಾಗಣದ ಆಯ್ಕೆಯೂ ಪ್ರಗತಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಒಂದೊದಾಗಿ ಅಪ್ಟೇಡ್ ನೀಡಲಿದ್ದಾರೆ.