More

    ಯೋಗರಾಜ್​ ಭಟ್​ ಬರೆದ ಕಥೆಗೆ, ಅಂದು ಮಿಸ್ ಆಗಿದ್ದ ಹೀರೋ ಇಂದು ಮತ್ತೆ ಸಿಕ್ಕರು!

    ಸ್ಯಾಂಡಲ್​ವುಡ್​ ನಿರ್ದೇಶಕ ಯೋಗರಾಜ್​ ಭಟ್​ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳಿವೆ. ಒಂದಷ್ಟು ನಿರ್ಮಾಣ, ಮತ್ತೊಂದಿಷ್ಟು ನಿರ್ದೇಶನ. ಅದೆಲ್ಲರ ನಡುವೆ ಒಂದಷ್ಟು ಸಿನಿಮಾಗಳಿಗೆ ಕಥೆ ಬರೆದೂ ಕೊಟ್ಟಿದ್ದಾರೆ. ಈ ಮೂರರಲ್ಲಿ ಕೊನೆಯಲ್ಲಿರುವ ವಿಚಾರಕ್ಕೆ ಬರುವುದಾದರೆ, ಸದ್ದಿಲ್ಲದೆ ಹೊಸ ಕಥೆಯೊಂದನ್ನು ಯೋಗರಾಜ್​ ಭಟ್​ ಬರೆದಿದ್ದು, ಆ ಚಿತ್ರದಲ್ಲಿ ’ಕವಲುದಾರಿ’ ಸಿನಿಮಾ ಖ್ಯಾತಿಯ ರಿಷಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ: ನಯನತಾರಾ ಮತ್ತು ಭಾವಿ ಪತಿ ವಿಘ್ನೇಶ್​ಗೂ ಕರೊನಾ ಪಾಸಿಟಿವ್​!

    ಹೌದು, ಇಂದು ರಿಷಿ ಜನ್ಮದಿನ. ಆ ಪ್ರಯುಕ್ತ ಚಿತ್ರತಂಡ ರಿಷಿಗೆ ಜನ್ಮದಿನ ಶುಭಾಶಯ ಕೋರಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರವನ್ನು ಮೋಹನ್​ ಸಿಂಗ್​ ಜಿ ನಿರ್ದೇಶನ ಮಾಡಲಿದ್ದು, ಸ್ಕ್ರೀನ್ ಪ್ಲೇ ಸಹ ಬರೆದಿದ್ದಾರೆ. ಅದರಂತೆ ಕಥೆ ಮತ್ತು ಗೀತರಚನೆ ಯೋಗರಾಜ್​ ಭಟ್​ ಅವರ ಉಸ್ತುವಾರಿ. ಎಸ್​. ವಿ ನಾರಾಯಣ್​ ಚಿತ್ರವನ್ನು ನಿರ್ಮಾಣ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಶೀಘ್ರದಲ್ಲಿ ಶೀರ್ಷಿಕೆಯನ್ನೂ ರಿವೀಲ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

    ಇದನ್ನೂ ಓದಿ: ಸುಶಾಂತ್​ ವಿಚಾರದಲ್ಲಿ ಕೊನೆಗೂ ಮೌನ ಮುರಿದ ಸಲ್ಮಾನ್​ ಖಾನ್!; ನೆಟ್ಟಿಗರಿಂದ ಮತ್ತೆ ತರಾಟೆ

    ಅಂದಹಾಗೆ, ನಿಮಗೆ ನೆನಪಿರಬಹುದು, ನಿರ್ದೇಶಕ ಯೋಗರಾಜ್​ ಭಟ್​ ಈ ಹಿಂದೆ ‘ಗಾಳಿಪಟ‘ ಸೀಕ್ವೆಲ್​ ಶುರುಮಾಡಿದಾಗ, ಶರಣ್​, ಲೂಸಿಯಾ ಪವನ್​ಕುಮಾರ್​ ಮತ್ತು ರಿಷಿ ಸಹ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಅಧಿಕೃತ ಮಾಡಿದ್ದರು. ಅದಾದ ಬಳಿಕ ತಾರಾಗಣದಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದ ನಿರ್ದೇಶಕರು, ಹಳೇ ತಂಡಕ್ಕೆ ಮಣೆ ಹಾಕಿದ್ದರು. ಗೋಲ್ಡನ್ ಸ್ಟಾರ್​ ಗಣೇಶ್​, ದಿಗಂತ್​ ಅವರನ್ನು ಮರಳಿ ಕರೆತಂದಿದ್ದರು.
    ಇದೀಗ ಮತ್ತೆ ರಿಷಿ ಸಿನಿಮಾಕ್ಕೆ ಯೋಗರಾಜ್​ ಭಟ್​ ಕಥೆ ಬರೆದಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಕರೊನಾ ಸ್ಥಿತಿಗತಿ ನೋಡಿಕೊಂಡು, ಶೂಟಿಂಗ್​ಗೆ ತಯಾರಿ ಮಾಡಿಕೊಳ್ಳಲಿದ್ದಾರೆ ನಿರ್ದೇಶಕರು. ತಾರಾಗಣದ ಆಯ್ಕೆಯೂ ಪ್ರಗತಿ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಒಂದೊದಾಗಿ ಅಪ್​ಟೇಡ್​ ನೀಡಲಿದ್ದಾರೆ.

    PHOTOS | ಅಪ್ಪನ ಅಪರೂಪದ ಫೋಟೋಗಳನ್ನು ಹಂಚಿಕೊಂಡ ಸಿನಿಮಾ ಮಂದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts