ಹೈದರಾಬಾದ್: ದೇಶಾದ್ಯಂತ ಕರೊನಾ ಕೇಸ್ಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆಯೇ, ಬೇರೆಬೇರೆ ಭಾಷೆಗಳಲ್ಲಿ ಚಿತ್ರೀಕರಣ ಚಟುವಟಿಕೆಗಳು ಪ್ರಾರಂಭವಾಗುತ್ತಿವೆ. ಈಗಾಗಲೇ ಮುಂಬೈನಲ್ಲಿ ಕೆಲವು ಹಿಂದಿ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗಿದೆ. ಈಗ ಟಾಲಿವುಡ್ನಲ್ಲೂ ಚಿತ್ರೀಕರಣ ಚಟುವಟಿಕೆಗಳಿಗೆ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಬಾಕಿ ಉಳಿದಿರುವ ಶೂಟಿಂಗ್ ಮಾಡಿಕೊಳ್ಳಲು ಜುಲೈ 1ರಿಂದ ಆರ್ಆರ್ಆರ್ ತಂಡ ಪ್ಲಾನ್ ಮಾಡಿದೆ. ಜತೆಗೆ ಸಿನಿಮಾ ಪ್ರೇಮಿಗಳಿಗೆ ಬಿಗ್ ಸರ್ಪೈಸ್ ಸಹ ನೀಡಲಿದ್ದಾರಂತೆ ರಾಜಮೌಳಿ.
ಇದನ್ನೂ ಓದಿ: 2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್ವುಡ್: ನಾವೆಷ್ಟು ಸಿದ್ಧರಿದ್ದೇವೆ?
ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್ 13ಕ್ಕೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕ ಯಾವಾಗ ಎಂಬುದು ಸದ್ಯಕ್ಕೆ ಅಧಿಕೃತವಾಗಿಲ್ಲ. ಈ ನಡುವೆ, 2022ರ ಏಪ್ರಿಲ್ನಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ.
ಇದನ್ನೂ ಓದಿ: 2ನೆಯ ಅಲೆಯ ನಂತರದಲ್ಲಿ ಸ್ಯಾಂಡಲ್ವುಡ್: ನಾವೆಷ್ಟು ಸಿದ್ಧರಿದ್ದೇವೆ?
ಅಂದಹಾಗೆ ಜುಲೈ ವೇಳೆಗೆ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಲಿದೆ. ಪ್ರೇಕ್ಷಕರಿಗೂ ಸರ್ಪೈಸ್ ನೀಡಲು ರಾಜಮೌಳಿ ನಿರ್ಧರಿಸಿದ್ದಾರೆ. ಇನ್ನೇನು ಶೀಘ್ರದಲ್ಲಿ ಇದೇ ತಿಂಗಳೊಳಗೆ ನೂತನ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಮತ್ತು ರಾಮ್ಚರಣ್ ತೇಜ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಸೇರಿ ಹಲವರಿದ್ದಾರೆ.