More

    ಶ್ರೀಲೀಲಾ ಅವರ ಪಾತ್ರವನ್ನು ಎಲ್ಲರೂ ಮೆಚ್ಚುತ್ತಾರೆ: ನಿರ್ದೇಶಕ ಅನಿಲ್ ರವಿಪುಡಿ

    ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಎಂದೇ ಹೆಸರಾದ ಬಾಲಯ್ಯ ನಟನೆಯ ಬಹುನಿರೀಕ್ಷಿತ ‘ಭಗವಂತ ಕೇಸರಿ’ ಸಿನಿಮಾದ ಬಿಡುಗಡೆಗೆ ಸದ್ಯ ದಿನಗಣನೆ ಆರಂಭಗೊಂಡಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿರುವ ಕನ್ನಡದ ಬೆಡಗಿ ಶ್ರೀಲೀಲಾ ಬಗ್ಗೆ ನಿರ್ದೇಶಕರು ಮೆಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಆ ಫಾಂಟ್ ಬಳಸಿ ಪಾಕ್ ಮಾಜಿ ಪ್ರಧಾನಿ ನವಾಜ್​ ಷರೀಫ್​ ಜೈಲು ಸೇರಬೇಕಾಯ್ತು!

    ಅನಿಲ್ ರವಿಪುಡಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಭಗವಂತ ಕೇಸರಿ’ ಚಿತ್ರದಲ್ಲಿ ಸ್ಯಾಂಡಲ್​ವುಡ್​ನ ನಟಿ ಶ್ರೀಲೀಲಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಬಾಲಯ್ಯ ಅವರೊಂದಿಗೆ ಕಾಣಿಸಿಕೊಳ್ಳುವ ಶ್ರೀಲೀಲಾ ಅವರ ಪಾತ್ರ ವಿಶೇಷವಾಗಿದೆ ಮತ್ತು ಹೆಚ್ಚು ಪ್ರಾಮುಖ್ಯತೆ ಇರುವ ರೋಲ್ ಎಂದು ನಿರ್ದೇಶಕರು ತಿಳಿಸಿದ್ದಾರೆ.

    ಸಾಕಷ್ಟು ಸ್ಕೋಪ್ ಇರುವ ವಿಶೇಷ ಪಾತ್ರದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ಇದಕ್ಕಾಗಿ ಅವರು ಹೆಚ್ಚು ಶ್ರಮ ವಹಿಸಿದ್ದಾರೆ. ಈ ಹಿಂದೆ ನಟಿಸಿದ್ದ ಸಿನಿಮಾಗಳ ಪಾತ್ರಗಳಿಗಿಂತ ಈ ಚಿತ್ರದಲ್ಲಿನ ಪಾತ್ರ ಅವರಿಗೆ ಹೊಸ ಲುಕ್​ ನೀಡಲಿದೆ. ಬಾಲಕೃಷ್ಣ ಅವರೊಂದಿಗಿನ ಭಾವನಾತ್ಮಕ ದೃಶ್ಯಗಳು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ ಎಂದು ಅನಿಲ್ ಹೇಳಿದ್ದಾರೆ.

    ಇದನ್ನೂ ಓದಿ:  ಪಾಕ್​ ಬ್ಯಾಟ್ಸ್​ಮನ್​ಗಳ ವಿರುದ್ಧ ಅಬ್ಬರಿಸಿದ ಟೀಂ ಇಂಡಿಯಾ ಬೌಲರ್ಸ್​; 191ಕ್ಕೆ ಸರ್ವಪತನ

    ಬಾಲಯ್ಯ ಮತ್ತು ನಟಿ ಕಾಜಲ್ ಅಗರ್​ವಾಲ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಶ್ರೀಲೀಲಾ, ಅರ್ಜುನ್ ರಾಂಪಾಲ್​, ಟಿ.ಎನ್​. ಬಾಲಕೃಷ್ಣ, ಆರ್. ಸರತ್​ ಕುಮಾರ್​ ಮುಂತಾದವರ ತಾರಾಗಣವಿದೆ. ಸಿನಿಮಾ ಇದೇ ಅಕ್ಟೋಬರ್ 19 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧಗೊಂಡಿದೆ,(ಏಜೆನ್ಸೀಸ್).

    BIGGBOSS KANNADA SEASON 10: ತುಕಾಲಿ ಸಂತೋಷ್ ಹುಟ್ಟಿದ್ದೇ ಪವಾಡವಂತೆ; ಶಾಕ್​​ ಆದ ಸ್ಪರ್ಧಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts