ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇದೀಗ 10ನೇ ಸೀಸನ್ಗೆ ಕಾಲಿಟ್ಟಿದ್ದು, ಗ್ರ್ಯಾಂಡ್ ಓಪನಿಂಗ್ ಮೂಲಕ ಯಶಸ್ವಿಯಾಗಿ ಪ್ರಾರಂಭಗೊಂಡಿದೆ. ಮೊದಲ ದಿನದಿಂದ ಪರಸ್ಪರ ಒಬ್ಬರನೊಬ್ಬರು ಅರ್ಥೈಸಿಕೊಂಡು ಇದೀಗ ವಾರಾಂತ್ಯಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳು, ಮೊದಲ ವಾರದ ಕಥೆ ಕಿಚ್ಚನ ಜತೆಗೆ ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ: VIDEO| ಅಪರೂಪದ ಘಟನೆಗೆ ಸಾಕ್ಷಿಯಾಯಿತು ಭಾರತ-ಪಾಕ್ ನಡುವಿನ ಪಂದ್ಯ; ವಿಭಿನ್ನ ಅನುಭವ ಎಂದ ನೆಟ್ಟಿಗರು
ಈ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ದೊಡ್ಡ ಮಂದಿಯನ್ನು ತಮ್ಮ ಮಾತು, ವರಸೆ ಮೂಲಕವೇ ನಗೆಗಡಲಲ್ಲಿ ತೇಲಿಸುವ ಪ್ರಯತ್ನದಲ್ಲಿ ತೊಡಗಿರುವ ತುಕಾಲಿ ಸಂತೋಷ್, ಕೆಲವೊಮ್ಮೆ ಮುಗ್ಗರಿಸುತ್ತಿರುವುದು ಅವರಿಗೆ ಅರಿವಿಗೆ ಬಾರದೆ ಹೋಗಿದೆಯಾ ಎಂಬುದು ಸದ್ಯ ವೀಕ್ಷಕರ ಪ್ರಶ್ನೆಯಾಗಿದೆ.
ಪ್ರತಿಬಾರಿ ಕಾಮಿಡಿ ಮಾಡುವ ಸಂತೋಷ್ ಅಪರೂಪಕ್ಕೊಮ್ಮೆ ಸೀರಿಯಸ್ ಆಗಿದ್ದಾರೆ. ಅಷ್ಟೇ ಅಲ್ಲ, ತುಂಬ ಸೀರಿಯಸ್ ಆಗಿ ತಮ್ಮ ಹುಟ್ಟಿನ ಪವಾಡದ ಕಥೆಯನ್ನು ರೋಚಕವಾಗಿ ಮನೆ ಮಂದಿಗೆ ತಿಳಿಸಿದ್ದಾರೆ. “ನಾನು ಪವಾಡ ಪುರುಷ ಅಲ್ಲ, ನಾನು ಹುಟ್ಟಿದ್ದೇ ಒಂದು ಪವಾಡ. ಪವಾಡದಿಂದ ಜನನ. ನಿಮಗಿನ್ನು ಗೊತ್ತಿಲ್ಲ, ಒಂಬತ್ತು ತಿಂಗಳಾಗಿ ಮೂರು ದಿನಕ್ಕೆ ಹುಟ್ಟಿರೋದು. 9 ತಿಂಗಳು ಕರೆಕ್ಟಾಗಿ ಬರುತ್ತಲ್ವಾ, ಅವತ್ತು ಜೋರಾದ ಗುಡುಗು, ಸಿಡಿಲು, ಮಳೆ, ಗಾಳಿ” ಎಂದು ಹೇಳಿದರು.
ಇದನ್ನೂ ಓದಿ: ಪಾತ್ರೆಗಳನ್ನು ಸ್ವಚ್ಛಗೊಳಿಸಿದ ನಂತರ ಈ ಟಿಪ್ಸ್ ಪಾಲಿಸಿದರೆ ಬ್ಯಾಕ್ಟೀರಿಯಾದಿಂದ ಮುಕ್ತಿ!
ಇಷ್ಟು ಹೇಳುತ್ತಿದ್ದ ಹಾಗೆಯೇ ಮಧ್ಯೆ ಮಾತನಾಡಿದ ವರ್ತೂರು ಸಂತೋಷ್. “ಈ ಭೂಮಿಗೆ ಯಾವ್ದೋ ದುಷ್ಟಶಕ್ತಿ ಬರ್ತಿದೆ ಅಂತ ಸೂಚನೆ’ ನೀಡಿರಬಹುದು ಎಂದರು. ಈ ಮಾತಿಗೆ ಉಳಿದವರೆಲ್ಲ ಜೋರಾಗಿ ನಕ್ಕಿದ್ದಾರೆ. ಸಂತು ಹೇಳಿಕೆಗೆ ಟಕ್ಕರ್ ಕೊಟ್ಟ ಗೌರೀಶ್ ಅಕ್ಕಿ, ‘ಧುರ್ಯೋಧನ ಹುಟ್ಟಬೇಕಾದರೆ ಹಿಂಗೇ ಆಗಿತ್ತಂತೆ’ ಎಂದು ಸಂತೋಷ್ ಜನ್ಮಕ್ಕೆ ಪುರಾಣಸ್ಪರ್ಶವನ್ನು ಕೊಟ್ಟರು.
ಮಾತು ಮುಂದುವರೆಸಿದ ತುಕಾಲಿ ಸಂತು, “ಜೋರಾದ ಗುಡುಗು, ಸಿಡಿಲು, ಮಳೆ ಬರ್ತಾ ಐತೆ. ರಾತ್ರಿ ಒಂಬತ್ತು ಗಂಟೆ. ಅಮ್ಮ ಬೆಳಿಗ್ಗೆ ತಿಂಡಿ ಮಾಡ್ಬೇಕಲಾ, ತರಕಾರಿ ಹಿಡ್ಕೊಂಡು ಬರ್ತಾ ಇದ್ದಾರೆ ದೇವಸ್ಥಾನದ ಹತ್ತಿರ, ಆಗ ಯಾವ್ದೋ ಒಂದು ಶಬ್ದ. ಇದು ನಿಜವಾಗ್ಲೂ ನಡೆದಿದ್ದು. ನಮ್ಮೂರಲ್ಲಿ ಮಾರಮ್ಮನ ಗುಡಿ, ಆಂಜನೇಯ ಸ್ವಾಮಿ ಗುಡಿ ಇವೆ. ಈಗ ದೇವಸ್ಥಾನ ಕಟ್ಟುತ್ತಿದ್ದಾರೆ. ವೆರಿ ಪವರ್ಫುಲ್ ಆಂಜನೇಯಸ್ವಾಮಿ. ಆ ಗುಡಿ ಹತ್ರ ನಮ್ಮಮ್ಮ ತರಕಾರಿ ಬ್ಯಾಗ್ ಹಿಡಿದುಕೊಂಡು ಬರುವಾಗ ಒಂದು ಧ್ವನಿ ಕೇಳ್ತಂತೆ, ನಿನ್ ಮಗ ಇಡೀ ಜಗತ್ತನ್ನೇ ಆಳ್ತಾನೆ ಅಂತ ಹೇಳಿದರು” ಎಂದು ಸಂತು ಹೇಳಿದ್ದಾರೆ.
ಇದನ್ನೂ ಓದಿ: ಮಾದಕವಸ್ತು ಸಾಗಿಸುತ್ತಿದ್ದ ಆಫ್ರಿಕನ್ ಮಹಿಳೆಯರು ಅಂದರ್; ಸ್ಯಾನಿಟರಿ ಪ್ಯಾಡ್ನಲ್ಲಿತ್ತು 5 ಕೋಟಿ ರೂ. ಮೌಲ್ಯದ ಕೊಕೇನ್
ತುಕಾಲಿ ಸಂತೋಷ್ ಹೇಳಿದ ಈ ಕಥೆಯನ್ನು ಆಲಿಸಿದ ಇತರೆ ಸ್ಪರ್ಧಿಗಳು, ‘ನೀವು ಆಗ ಇನ್ನೂ ಹುಟ್ಟೇ ಇರಲಿಲ್ಲ. ಇದೆಲ್ಲಾ ನಿಮಗೆ ಯಾರು ಹೇಳಿದ್ದು? ನೀವು ಎಲ್ಲಿದ್ರಿ ಆವಾಗ’ ಎಂಬ ಹಲವು ಪ್ರಶ್ನೆಗಳನ್ನು ಬೆಂಬಿಡದೆ ಕೇಳಿದ್ದಾರೆ. ಈ ಎಲ್ಲಾ ಪ್ರಶ್ನೆಗೆ ಸಂತು ಕೊಟ್ಟ ಉತ್ತರವೇನು, ವಾರದ ಕಥೆಯಲ್ಲಿ ಕಿಚ್ಚ ಸುದೀಪ್ ಹೇಳುವುದೇನು ಎಂಬುದನ್ನು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
ಚಿಂತಾಮಣಿ ನಗರಸಭಾ ಸದಸ್ಯ ಅಗ್ರಹಾರ ಮುರಳಿ ಮೇಲೆ ಮಾರಣಾಂತಿಕ ಹಲ್ಲೆ; ಎಚ್ಡಿಕೆ ಹೇಳಿದ್ದಿಷ್ಟು