ಬೆಂಗಳೂರು: ವಿಆರ್ಎಲ್ ಮೀಡಿಯಾ ಲಿಮಿಟೆಡ್ನ ‘ದಿಗ್ವಿಜಯ ನ್ಯೂಸ್’ ಸುದ್ದಿವಾಹಿನಿ ನಡೆಸಿದ ಸಂದರ್ಶನವೊಂದು ನಿನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಆ ಸಂದರ್ಶನದ ತುಣುಕುಗಳು ಹಲವರಿಂದ ಮತ್ತೆ ಮತ್ತೆ ಪೋಸ್ಟ್ ಆಗುತ್ತಿರುವ ಮೂಲಕ ಬಹಳಷ್ಟು ಜನರ ಗಮನವನ್ನು ಸೆಳೆಯುತ್ತಿದೆ. ಮಾತ್ರವಲ್ಲ ಒಂದಷ್ಟು ಚರ್ಚೆಯನ್ನೂ ಹುಟ್ಟುಹಾಕುತ್ತಿದೆ.
ಲಾಕ್ಡೌನ್ ಸಂದರ್ಭದಲ್ಲಿ ನಟ ರಿಯಲ್ ಸ್ಟಾರ್ ಉಪೇಂದ್ರ ಸಂತ್ರಸ್ತ ರೈತರಿಂದ ಉತ್ಪನ್ನಗಳನ್ನು ಖರೀದಿಸಿ ಸಂಕಷ್ಟದಲ್ಲಿ ಇರುವವರಿಗೆ ಉಚಿತವಾಗಿ ವಿತರಿಸುತ್ತಿರುವ ಮೂಲಕ ನಡೆಸುತ್ತಿರುವ ನಿರಂತರ ಸಮಾಜಸೇವೆ, ಅವರು ಇತ್ತೀಚೆಗೆ ತಾವು ‘ಸಿಎಂ’ ಅರ್ಥಾತ್ ಕಾಮನ್ ಮ್ಯಾನ್ ಆಗಿರಬೇಕು ಎಂದು ಬಯಸಿ ವ್ಯಕ್ತಪಡಿಸಿದ್ದ ಅಭಿಪ್ರಾಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಬಹಳಷ್ಟು ಜನರ ಮೆಚ್ಚುಗೆ ಗಳಿಸಿದ್ದರು. ಜತೆಗೆ ಅವರ ಸಾಮಾಜಿಕ ಸೇವೆ, ‘ಸಿಎಂ’ ಹೇಳಿಕೆ ಕುರಿತು ಕೆಲವರು ಅಪಸ್ವರ ಎತ್ತಿದ್ದಲ್ಲದೆ, ಅವರ ರುಪ್ಪೀಸ್ ರೆಸಾರ್ಟ್ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆಗಳು ಕೇಳಿಬಂದಿದ್ದವು. ಇದರಿಂದ ಕಳೆದ ಕೆಲವು ದಿನಗಳಿಂದ ಉಪೇಂದ್ರ ಮತ್ತವರ ಅಭಿಮಾನಿಗಳು ಹಾಗೂ ಇತರರ ನಡುವೆ ಸೋಷಿಯಲ್ ಮೀಡಿಯಾದಲ್ಲೇ ಒಂದಷ್ಟು ಪ್ರಶ್ನೋತ್ತರ ಥರದ ಪ್ರತಿಕ್ರಿಯೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ಅವರನ್ನು ದಿಗ್ವಿಜಯ ಸುದ್ದಿವಾಹಿನಿ ವಿಶೇಷ ಸಂದರ್ಶನ ನಡೆಸಿದ್ದು, ಅದು ಮೇ 28ರ ಮಧ್ಯಾಹ್ನ ಪ್ರಸಾರವಾಗಿತ್ತು.
ನಟ-ನಿರ್ದೇಶಕ ಉಪೇಂದ್ರ ಅವರನ್ನು ದಿಗ್ವಿಜಯ ನಿರೂಪಕಿ ಗೀತಾ ಸುದೀರ್ಘವಾಗಿ ಸಂದರ್ಶನ ನಡೆಸಿದ್ದರು. “ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದ್ರೆ ಉಪ್ಪಿ ‘ಸಿಎಂ’ ಆಗ್ತಾರಾ?” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಈ ಸಂದರ್ಶನಕ್ಕೆ ಅತ್ಯುತ್ತಮ ಸ್ಪಂದನೆ ಲಭಿಸಿದೆ. ಅದರಲ್ಲೂ ಪ್ರಸ್ತುತ ರಾಜಕೀಯ-ಪ್ರಜಾಕೀಯ ಕುರಿತ ದಿಗ್ವಿಜಯದ ಪ್ರಶ್ನೆಗಳು ಹಾಗೂ ಉಪೇಂದ್ರರ ಉತ್ತರಗಳ ತುಣುಕುಗಳು ಸಂದರ್ಶನ ಪ್ರಸಾರವಾದಾಗಿನಿಂದಲೂ ಹರಿದಾಡುತ್ತಲೇ ಇದ್ದು ಸಾಕಷ್ಟು ಗಮನ ಸೆಳೆಯುತ್ತಿವೆ. ಅಲ್ಲದೆ ಈ ಸಂದರ್ಶನ ದಿಗ್ವಿಜಯ ನ್ಯೂಸ್ ಫೇಸ್ಬುಕ್ ಖಾತೆಯಲ್ಲೂ ಪೋಸ್ಟ್ ಆಗಿದ್ದು, ಈಗಾಗಲೇ 92 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 450ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದು, 2200ಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ.
“ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದ್ರೆ ಉಪ್ಪಿ ‘ಸಿಎಂ’ ಆಗ್ತಾರಾ?” ಸಂದರ್ಶನದ ಪೂರ್ಣ ವೀಕ್ಷಣೆಗೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ.
ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ!; ಅಪ್ಪ-ಅಮ್ಮನಿಲ್ಲದ ಮಕ್ಕಳಿಗಾಗಿ ಪಿಎಂ ಕೇರ್ಸ್
ಕರೊನಾ ಸೋಂಕನ್ನು ಗೆದ್ದ ಶತಾಯುಷಿ ದಂಪತಿ; ಹೂವಿನ ಹಾರ ಹಾಕಿ ಸ್ವಾಗತಿಸಿದ ಗ್ರಾಮಸ್ಥರು