ಡೆಹ್ರಾಡೂನ್: ಉತ್ತರಾಖಂಡದ ಕಾಂಗ್ರೆಸ್ ಮುಖಂಡ ಸೂರ್ಯಕಾಂತ್ ಧಸಮಾನ್ ಅವರು ಕೊವಿಡ್-19 ಬಗ್ಗೆ ನೀಡಿದ ಹೇಳಿಕೆಯೊಂದು ತೀವ್ರ ವಿವಾದ ಸೃಷ್ಟಿಸಿದೆ.
ಕರೊನಾವನ್ನು ಕಳಿಸಿದ್ದು ಭಗವಾನ್ ಕೃಷ್ಣ ಎಂದು ಹೇಳಿ ಅನೇಕರ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ನಾನೇ ಸೃಷ್ಟಿಕೃರ್ತ..ನಾನೇ ವಿನಾಶಕ ಎಂದು ಭಗವಾನ್ ಶ್ರೀಕೃಷ್ಣನೇ ಹೇಳಿದ್ದಾಗಿ ಭಗವದ್ಗೀತೆಯಲ್ಲಿ ಉಲ್ಲೇಖವಾಗಿದೆ. ನಾನು ಇದನ್ನು ಪದೇಪದೆ ಹೇಳುತ್ತಿರುತ್ತೇನೆ. ಆ ದೇವರಿಂದಲೇ ಎಲ್ಲ. ಈಗಲೂ ಅಷ್ಟೇ, ಕರೊನಾ ವೈರಸ್ ಜಗತ್ತಿಗೆ ಆಕ್ರಮಿಸಲೂ ಶ್ರೀಕೃಷ್ಣನೇ ಕಾರಣ. ಇಡೀ ವಿಶ್ವದಲ್ಲಿ ಏನೇ ನಡೆದರೂ, ಅದು ಭಗವಂತನ ಇಚ್ಛೆ. ಅವನಿಂದಲೇ ಎಲ್ಲ ಎಂದು ಹೇಳಿದ್ದರು.
ಅಷ್ಟಕ್ಕೇ ಸುಮ್ಮನಿರದೆ…ಕೊವಿಡ್-19 ಮತ್ತು ಕೃಷ್ಣ ಇವೆರಡೂ ಶಬ್ದಗಳೂ ಕ ದಿಂದಲೇ ಶುರುವಾಗುತ್ತವೆ ಎಂದೂ ಹೇಳಿದ್ದರು.
ಆದರೆ ಧಸಮಾನ್ ಅವರ ಹೇಳಿಕೆ ಇಂಟರ್ನೆಟ್ನಲ್ಲಿ ಸಿಕ್ಕಾಪಟೆ ಚರ್ಚೆ ಹುಟ್ಟುಹಾಕಿದೆ. ಸಾಂಕ್ರಾಮಿಕ ರೋಗಕ್ಕೆ ಕಾರಣ ದೇವರೇ ಎಂದು ಹೇಳಿದ ಕಾಂಗ್ರೆಸ್ ಮುಖಂಡನ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಈ ಮಧ್ಯೆ ಸೂರ್ಯಕಾಂತ್ ಧಸಮಾನ್ ಅವರೂ ಕೂಡ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ನುಣುಚಿಕೊಂಡಿದ್ದಾರೆ. (ಏಜೆನ್ಸೀಸ್)
ನಮ್ಮ ಬೆಂಬಲ ಬಿಜೆಪಿಗೆ ಎಂದ್ರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ; ಕಾಂಗ್ರೆಸ್ ವಿರುದ್ಧ ಕಿಡಿ