ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗಾಗಿ ಜಾರ್ಖಂಡ್ನ ರಾಜಧಾನಿ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಲಿ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಒತ್ತಾಯಿಸಿದ್ದಾರೆ. ಎಂಎಸ್ ಧೋನಿ, ದೇಶದ ಹಾಗೂ ಜಾರ್ಖಂಡ್ ರಾಜ್ಯದ ಹೆಮ್ಮೆಯ ವ್ಯಕ್ತಿ. ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಾರ್ಖಂಡ್ ಕ್ರಿಕೆಟಿಗನನ್ನು ಬ್ಲೂ ಜೆಸಿರ್ಯಲ್ಲಿ ನೋಡಲು ಆಗುವುದಿಲ್ಲ.ಆದರೆ, ಅದೆಷ್ಟೋ ಅಭಿಮಾನಿಗಳ ಆಸೆ ಇನ್ನು ಈಡೇರಿಲ್ಲ. ಹೀಗಾಗಿ ಧೋನಿಗಾಗಿ ರಾಂಚಿಯಲ್ಲಿ ವಿದಾಯದ ಪಂದ್ಯ ಆಯೋಜಿಸಬೇಕು ಎಂದು ಹೇಮಂತ್ ಹೇಳಿದ್ದಾರೆ.
ಇದನ್ನೂ ಓದಿ: PHOTOS: ಫೋಟೋಗಳ ಮೂಲಕ ಧೋನಿ ಸಾಧನೆ ಅನಾವರಣಗೊಳಿಸಿದ ಬಿಸಿಸಿಐ
ಬಿಸಿಸಿಐ ಧೋನಿಗೆ ವಿದಾಯದ ಪಂದ್ಯ ಆಯೋಜಿಸಬೇಕು. ಇದು ವಿಶ್ವದಾದ್ಯಂತ ಇರುವ ಅವರ ಅಭಿಮಾನಿಗಳ ಅನುಕೂಲಕ್ಕಾಗಿ ಕ್ರಿಕೆಟ್ ಮಂಡಳಿ ಒತ್ತಾಯಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೇಮಂತ್ ಸೋರೆನ್ ತಿಳಿಸಿದ್ದಾರೆ. 2004ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ ಧೋನಿ, ಭಾರತೀಯ ಕ್ರಿಕೆಟ್ನಲ್ಲೇ ತಮ್ಮದೇ ಛಾಪು ಮೂಡಿಸಿದರು ಎಂದರು. ವಿಶ್ವ ಕ್ರಿಕೆಟ್ನಲ್ಲೇ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ ಎಂದು ರಾಂಚಿ ಹುಡುಗನನ್ನು ಹೇಮಂತ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಸ್ಟಂಪಿಂಗ್ನಲ್ಲಿ ಎಂ.ಎಸ್. ಧೋನಿ ಪಿಕ್ಪಾಕೆಟ್ಗಿಂತಲೂ ವೇಗವಂತೆ: ಹೇಳಿದ್ಯಾರು ಗೊತ್ತಾ?
ಧೋನಿ, ಅಂದಿನ ಬಿಹಾರದ ರಾಂಚಿಯಲ್ಲಿ ಜನಿಸಿದರು. ಬಳಿಕ ಜಾರ್ಖಂಡ್, ಬಿಹಾರದಿಂದ ಬೇರ್ಪಟ್ಟು ಪ್ರತ್ಯೇಕ ರಾಜ್ಯವಾಯಿತು. ರಾಂಚಿ, ಜಾರ್ಖಂಡ್ನ ರಾಜಧಾನಿ ಆಯಿತು. ದೇಶೀಯ ಕ್ರಿಕೆಟ್ನಲ್ಲಿ ಬಿಹಾರ, ಜಾರ್ಖಂಡ್ ಹಾಗೂ ಪೂರ್ವ ವಲಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. 39 ವರ್ಷದ ಧೋನಿ, 131 ಪ್ರಥಮ ದರ್ಜೆ ಪಂದ್ಯಗಳಿಂದ 7038 ರನ್ ಸಿಡಿಸಿದ್ದಾರೆ. ಇದೀಗ ಜಾರ್ಖಂಡ್ ಮುಖ್ಯಮಂತ್ರಿ ವಿದಾಯ ಪಂದ್ಯ ಆಯೋಜಿಸಬೇಕೆಂದು ಬಲವಾದ ಮನವಿ ಮಾಡಿದ್ದಾರೆ.
VIDEO: ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ಪಾಕ್ ಆಟಗಾರ್ತಿಯ ಸಂದೇಶ ಹೀಗಿದೆ…!