ಧಾರವಾಡ: ಇಲ್ಲಿನ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಶ್ರೀಮದ್ ಭಗವದ್ಗೀತಾದ ೧೫ನೇ ಅಧ್ಯಾಯವಾದ ಪುರುಷೋತ್ತಮ ಯೋಗ ಅಭಿಯಾನ ಕಾರ್ಯಕ್ರಮವನ್ನು ಉದಯಗಿರಿಯ ಪ್ರಕಾಶ ದೇಸಾಯಿ ಅವರ ಮನೆಯಲ್ಲಿ ಮೇ ೪ ಮತ್ತು ೫ರಂದು ಸಂಜೆ ೬ರಿಂದ ೭ರವರೆಗೆ ಆಯೋಜಿಸಲಾಗಿದೆ. ಡಾ. ಭೀಮಸೇನಾಚಾರ್ಯ ಮಳಗಿ ವಿಶೇಷ ಉಪನ್ಯಾಸ ನೀಡುವರು. ಇದಕ್ಕೂ ಮೊದಲು ನಾರಾಯಣಿ ಭಜನಾ ಮಂಡಳಿಯಿAದ ಭಜನೆ ಮತ್ತು ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಪಾರಾಯಣ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.