ಶಿರಡಿ: ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾಗೆ ಲಕ್ಷಾಂತರ ರೂ. ಮೌಲ್ಯದ ವಜ್ರಖಚಿತ ಚಿನ್ನದ ಕಿರೀಟವನ್ನು ಇಂಗ್ಲೆಂಡ್ ಮೂಲದ ಭಕ್ತರೊಬ್ಬರು ಕಾಣಿಕೆಯಾಗಿ ಅರ್ಪಿಸಿ ಭಕ್ತಿಯ ಪರಾಕಷ್ಟೆ ಮೆರೆದಿದ್ದಾರೆ.
ಚಿನ್ನ-ವಜ್ರದ ಕಿರೀಟ, ಹಾರಗಳನ್ನು ತಿರುಪತಿ ತಿಮ್ಮನಿಗೆ ಅರ್ಪಿಸುವಂತೆ ಶಿರಡಿ ಸಾಯಿಬಾಬಾಗೂ ಭಕ್ತರು ಕಾಣಿಕೆ ನೀಡುತ್ತಲೇ ಇದ್ದಾರೆ. ಆರತಿ ಸಮಯದಲ್ಲಿ ಸಾಯಿಬಾಬಾಗೆ ಕಿರೀಟ ತೊಡಿಸಿ ಪೂಜಿಸುವುದು ವಾಡಿಕೆ. ಈ ಹಿಂದೆ ಬೆಳ್ಳಿ ಕಿರೀಟ ತೊಡಿಸಲಾಗುತ್ತಿತ್ತು. ಕೆಲ ವರ್ಷದ ಹಿಂದೆ ಚಿನ್ನದ ಕಿರೀಟಧಾರಣೆ ಮಾಡಲಾಯಿತು. ಹಲವು ಭಕ್ತರು ಬೆಳ್ಳಿ-ಚಿನ್ನದ ಕಿರೀಟಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.
ಇದೀಗ ಇಂಗ್ಲೆಂಡ್ ಮೂಲದ ಕನಾರಿ ಸುಬಾರಿ ಪಟೇಲ್ ಎಂಬುವವರು ವಜ್ರಖಚಿತ ಚಿನ್ನದ ಕಿರೀಟವನ್ನು ಸಾಯಿಬಾಬಾ ಟ್ರಸ್ಟ್ಗೆ ಅರ್ಪಿಸಿದ್ದಾರೆ. ಕನಾರಿ ಸುಬಾರಿ ಪಟೇಲ್ ಅವರು ಸಾಯಿಬಾಬಾರ ಪರಮ ಭಕ್ತ. ಹಾಗಾಗಿ ನೆಚ್ಚಿನ ದೈವ ಸಾಯಿಬಾಬಾಗೆ ವಜ್ರದ ಕಿರೀಟವನ್ನು ಸಮರ್ಪಿಸಿದ್ದಾರೆ. ಇದರ ಬೆಲೆ 28 ಲಕ್ಷ ರೂಪಾಯಿ. (ಏಜೆನ್ಸೀಸ್)
3.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪತ್ತೆಗೆ ನೆರವಾದ ಆಟೋ ಚಾಲಕನಿಗೆ ಸನ್ಮಾನ
ತಿಪಟೂರಲ್ಲಿ ಎರಡು ತಲೆ ಹಾವು ಮಾರಾಟಕ್ಕೆ ಯತ್ನ: ಪಿಡಿಒ ಸೇರಿ ಮೂವರ ಬಂಧನ