ನವದೆಹಲಿ: ಕರೊನಾ ಪಿಡುಗು ಜೋರಾದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರ್ಕಾರದ ಎಲ್ಲ ಸಚಿವರು, ಅಧಿಕಾರಿಗಳು ಜೂಮ್ ಆ್ಯಪ್ ಬಳಸಿ ವಿಡಿಯೋ ಕಾನ್ಫರೆನ್ಸಿಂಗ್ ಮಾಡುತ್ತಿದ್ದರು. ಆದರೆ, ಜೂಮ್ ಆ್ಯಪ್ನಲ್ಲಿ ಹಲವು ನ್ಯೂನತೆಗಳಿದ್ದು, ಗೌಪ್ಯ ಮಾಹಿತಿ ಸೋರಿಕೆಯಾಗುವ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಡಿಯೋ ಕಾನ್ಫರೆನ್ಸಿಂಗ್ಗಾಗಿ ಜೂಮ್ ಆ್ಯಪ್ ಅನ್ನು ಬಳಸದಂತೆ ಎಲ್ಲರಿಗೂ ಸೂಚಿಸಿದೆ.
ಹಾಗಾದರೆ, ಮುಂದೇನು? ಮುಂದೆ ಏನೆಂದರೆ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ದೇಶಿಯವಾಗಿ, ಹೆಚ್ಚು ಸುರಕ್ಷತಾ ವ್ಯವಸ್ಥೆ ಹೊಂದಿರುವ ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ನಿರ್ಧಾರವಾಗಿದೆ. ಈ ಹಿನ್ನೆಲೆಯಲ್ಲಿ ಅದು ವಿಡಿಯೋ ಕಾನ್ಫರೆನ್ಸಿಂಗ್ ಆ್ಯಪ್ ಅಭಿವೃದ್ಧಿಪಡಿಸಿ, 1 ಕೋಟಿ ರೂ. ಬಹುಮಾನ ಗೆಲ್ಲಿ ಯೋಜನೆಯನ್ನು ಘೋಷಿಸಿದೆ.
ಈ ಆ್ಯಪ್ ಹೇಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಪೂರ್ವಷರತ್ತುಗಳನ್ನು ಹಾಕಿದೆ.
* ಈ ಆ್ಯಪ್ ಕಡಿಮೆ ವಿದ್ಯುತ್ ಮತ್ತು ಪ್ರೊಸೆಸರ್ ಅನ್ನು ಬಳಸುವಂತಿರಬೇಕು
* ಯಾವುದೇ ಬಾಹ್ಯ ಉಪಕರಣದ ಅವಲಂಬನೆ ಇರಬಾರದು
* ಯಾವುದೇ ಕಂಪ್ಯೂಟರ್ ಅಥವಾ ಉಪಕಣದಲ್ಲಿ ಕಾರ್ಯನಿರ್ವಹಿಸುವಂತಿರಬೇಕು. ಬಹುವ್ಯಕ್ತಿಗಳ ಕಾನ್ಫರೆನ್ಸ್ ಸೇರಿ ಎಲ್ಲ ಕಾನ್ಫರೆನ್ಸ್ಗಳಲ್ಲೂ ಬಳಕೆ ಯೋಗ್ಯವಾದ ಚಾಟ್ ಸೌಲಭ್ಯ ಹೊಂದಿರಬೇಕು.
* ಕಾನ್ಫರೆನ್ಸ್ಗೆ ಸೇರ್ಪಡೆಗೊಳ್ಳಲು ಸೈನ್ ಇನ್ ಮತ್ತು ನಾನ್ ಸೈನ್ಇನ್ ಸೌಲಭ್ಯ ಹೊಂದಿರಬೇಕು. ಅದು ಬ್ರೌಷರ್ ಅಥವಾ ಯಾವುದೇ ಆ್ಯಪ್ನ ಇಂಟರ್ಫೇಸ್ ಆಗಿರಬಹುದು
* ಅದು ಎನ್ಕ್ರಿಪ್ಟೆಡ್ ನೆಟ್ವರ್ಕ್ ಕಮ್ಯುನಿಕೇಷನ್ ಹೊಂದಿರಬೇಕು
* ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಇರಬೇಕು
ಆಸಕ್ತ ಡೆವೆಲಪರ್ ಅಥವಾ ಡೆವೆಲಪರ್ಗಳ ತಂಡ ಏಪ್ರಿಲ್ 30ರೊಳಗೆ ಅರ್ಜಿ ಸಲ್ಲಿಸಬೇಕು.
ತಾವೇ ವಿನ್ಯಾಸಗೊಳಿಸಿದ ಮಾಸ್ಕ್ ಧರಿಸಿ ಮಿಂಚುತ್ತಿರುವ ಸಚಿನ್, ದ್ರಾವಿಡ್, ಗಂಗೂಲಿ… ಏಕೆ ಗೊತ್ತೇ?