ನವದೆಹಲಿ: ನಮಸ್ತೆ ಟ್ರಂಪ್ ಕಾರ್ಯಕ್ರಮದ ಸಂದರ್ಭದಲ್ಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಪ್ರತಿಭಟನೆ ನೆಪದಲ್ಲಿ ಈಶಾನ್ಯ ದೆಹಲಿ ಹಿಂಸಾಚಾರಕ್ಕೆ ಕಿಚ್ಚು ಹಚ್ಚುವುದಕ್ಕಾಗಿ ಐವರ ಬ್ಯಾಂಕ್ ಖಾತೆಗೆ 1.61 ಕೋಟಿ ರೂಪಾಯಿ ಜಮೆ ಆಗಿದೆ. ಅವರೇ ಈ ಹಿಂಸಾಚಾರದ ಪಿತೂರಿಗಾರರು ಮತ್ತು ಅನುಷ್ಠಾನದ ಹೊಣೆಗಾರಿಕೆ ಹೊತ್ತವರು ಎಂದು ದೆಹಲಿ ಪೊಲೀಸರು ಸಲ್ಲಿಸಿರುವ ಚಾರ್ಜ್ಶೀಟ್ ಹೇಳಿದೆ.
ಕಾಂಗ್ರೆಸ್ ಪಕ್ಷದ ಮಾಜಿ ಕೌನ್ಸಿಲರ್ ಇಶ್ರತ್ ಜಹಾನ್, ಆ್ಯಕ್ಟಿವಿಸ್ಟ್ ಖಾಲಿದ್ ಸೈಫಿ, ಅಮಾನತುಗೊಂಡಿರುವ ಎಎಪಿ ಕೌನ್ಸಿಲರ್ ತಾಹಿರ್ ಹುಸೇನ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಅಲುಮ್ನಿ ಅಸೋಸಿಯೇಷನ್ ಪ್ರೆಸಿಡೆಂಟ್ ಶಿಫಾ ಉರ್ ರೆಹ್ಮಾನ್, ಜಾಮಿಯಾ ವಿದ್ಯಾರ್ಥಿ ಮೀರನ್ ಹೈದರ್ ಈ ಗಲಭೆ, ಹಿಂಸಾಚಾರದ ಸಂಚುಕೋರರು. ಫೆಬ್ರವರಿ ತಿಂಗಳಲ್ಲಿ ನಡೆದ ಕೋಮು ಹಿಂಸಾಚಾರದ ಪಿತೂರಿ ದೊಡ್ಡ ಮಟ್ಟದಲ್ಲಾಗಿದ್ದು, 15 ಆರೋಪಿಗಳ ವಿರುದ್ಧ ಸಾಕ್ಷ್ಯ ಸಂಗ್ರಹಿಸಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ ದೆಹಲಿ ಪೊಲೀಸರು.
ಇದನ್ನೂ ಓದಿ: 53 ಜನರ ಸಾವಿಗೆ ಕಾರಣವಾದ ದೆಹಲಿ ಹಿಂಸಾಚಾರದ ಬಲೆಗೆ ಮಗನನ್ನೂ ಕೆಡವಿದ್ರು ಅಂತಿದ್ದಾರೆ ಖಾಲಿದ್ ತಂದೆ !
ಇದರಂತೆ, 2019ರ ಡಿಸೆಂಬರ್ 1ರಿಂದ 2020ರ ಫೆಬ್ರವರಿ 26ರ ನಡುವೆ ಇಶ್ರತ್ ಜಹಾನ್, ಖಾಲಿದ್ ಸೈಫಿ, ತಾಹಿರ್ ಹುಸೇನ್, ಶಿಫಾ ಉರ್ ರೆಹ್ಮಾನ್, ಮೀರನ್ ಹೈದರ್ ಅವರ ಬ್ಯಾಂಕ್ ಖಾತೆಗೆ ಮತ್ತ ನಗದು ರೂಪದಲ್ಲಿ 1.61 ಕೋಟಿ ರೂಪಾಯಿ ಸಂದಾಯವಾಗಿದೆ. ಈ ಪೈಕಿ 1.48 ಕೋಟಿ ರೂಪಾಯಿಯನ್ನು ಅವರು ನಗದೀಕರಿಸಿದ್ದು, ಪ್ರತಿಭಟನಾ ಸ್ಥಳಗಳ ಮತ್ತು ಹಿಂಸಾಚಾರದ ಖರ್ಚು ನಿಭಾಯಿಸಲು ವ್ಯಯಿಸಿದ್ದಾರೆ. ಹೀಗೆ ಹಣ ವರ್ಗಾವಣೆಗೊಂಡ ಸುದೀರ್ಘ ಸ್ಟೋರಿಯನ್ನು ಅವರು ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ. (ಏಜೆನ್ಸೀಸ್)
ಪ್ರಜಾತಂತ್ರದ ಸೌಂದರ್ಯವಿದು- ಪ್ರತಿಭಟನಾನಿರತ ಸದಸ್ಯರ ಬಳಿಗೆ ರಾಜ್ಯಸಭೆ ಉಪಾಧ್ಯಕ್ಷ !: ಪಿಎಂ ಮೆಚ್ಚುಗೆ