More

    ಆಸ್ಪತ್ರೆ ಬಿಲ್ ಹೆಚ್ಚಾಯ್ತೆಂದು ಪ್ರಾಣ ಬಿಟ್ಟ ಯುವಕ!

    ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೊಬ್ಬ ಮನನೊಂದು ಖಾಸಗಿ ಹೋಟೆಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕ ನಿತೇಶ್(24) ಚಿಕಿತ್ಸೆಗಾಗಿ ಸಾಕಷ್ಟು ಮೊತ್ತವನ್ನು ಖರ್ಚು ಮಾಡಿದ್ದಾನೆ. ಇದಲ್ಲದೆ ತನ್ನ ಅನಾರೋಗ್ಯದಿಂದಾಗಿ ತಂದೆ-ತಾಯಿ ಇನ್ನಷ್ಟು ಆರ್ಥಿಕ ಹೊರೆ ಅನುಭವಿಸುವುದು ಬೇಡವೆಂದು ಪ್ರಾಣ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾಗೆ ಜಹೀರ್ ಖಾನ್​ನಂಥ ಎಡಗೈ ವೇಗಿಯ ಅವಶ್ಯಕತೆಯಿದೆ; ಆರ್​.ಅಶ್ವಿನ್

    ನಿತೇಶ್ ಮೃತದೇಹವು ದೆಹಲಿಯ ಆದರ್ಶ ನಗರದ ಹೋಟೆಲ್‌ ಒಂದರಲ್ಲಿ ಪತ್ತೆಯಾಗಿದ್ದು, ಆಕ್ಸಿಜನ್​ ಗ್ಯಾಸ್ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ ಮಧ್ಯಾಹ್ನ ನಿತೇಶ್ ಹೋಟೆಲ್ ಕೊಠಡಿಯನ್ನು ಕಾಯ್ದಿರಿಸಿದ್ದಾನೆ. ಕೊಠಡಿಯೊಳಗೆ ಹೋಗುವಾಗ ಆತನಲ್ಲಿ ಸಣ್ಣ ಬ್ಯಾಗ್ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ನಿತೇಶ್​ನ ಬ್ಯಾಗ್ ಪರಿಶೀಲಿಸಿದಾಗ ಸಾಕಷ್ಟು ಆಸ್ಪತ್ರೆ ಬಿಲ್​ಗಳು ಪತ್ತೆಯಾಗಿವೆ. ತನ್ನ ಅನಾರೋಗ್ಯದ ಕಾರಣದಿಂದ ಹೆಚ್ಚಾಗುತ್ತಿರುವ ಚಿಕಿತ್ಸಾ ವೆಚ್ಚದಿಂದ ಚಿಂತಿತನಾಗಿ ಪ್ರಾಣ ಬಿಟ್ಟಿದ್ದಾನೆ. ಪ್ಲಾಸ್ಟಿಕ್​ನಿಂದ ಮುಖ ಮುಚ್ಚಿಕೊಂಡಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್) 

    ಇದನ್ನೂ ಓದಿ: ದೂರು ನೀಡಲು ಬಂದಿದ್ದ ಮಹಿಳೆ ಜತೆ ಅಸಭ್ಯ ವರ್ತನೆ ಪ್ರಕರಣ; ಕೊಡಿಗೆಹಳ್ಳಿ ಇನ್ಸ್​ಪೆಕ್ಟರ್ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts