ದೆಹಲಿ: ದೆಹಲಿ ವಿಧಾನಸಭೆಯಿಂದ ಏಳು ಬಿಜೆಪಿ ಶಾಸಕರ ಅಮಾನತನ್ನು ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ತಮ್ಮ ಅಮಾನತು ಕ್ರಮವನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಫೆಬ್ರವರಿ 15 ರಂದು ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ಅವರ ಭಾಷಣದ ವೇಳೆ ಉಂಟಾದ ಗೊಂದಲದ ಮೇಲೆ ಈ ಶಾಸಕರನ್ನು ಅಮಾನತುಗೊಳಿಸಲಾಗಿತ್ತು. ಫೆ.27ರಂದು ಶಾಸಕರ ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿತ್ತು.
ಮೋಹನ್ ಸಿಂಗ್ ಬಿಶ್ತ್, ಅಜಯ್ ಮಹಾವರ್, ಒ.ಪಿ. ಶರ್ಮಾ, ಅಭಯ್ ವರ್ಮಾ, ಅನಿಲ್ ವಾಜಪೇಯಿ, ಜಿತೇಂದ್ರ ಮಹಾಜನ್ ಮತ್ತು ವಿಜೇಂದರ್ ಗುಪ್ತಾ ಅವರು ವಿಧಾನಸಭೆಯ ಬಜೆಟ್ ಅಧಿವೇಶನದ ವೇಳೆ ತಮ್ಮನ್ನು ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿರೋಧ ಪಕ್ಷದ ಸದಸ್ಯರನ್ನು ಚರ್ಚೆಯಲ್ಲಿ ಭಾಗವಹಿಸದಂತೆ ಮಾಡುವ ದುರುದ್ದೇಶಪೂರಿತ ಯೋಜನೆ ರೂಪಿಸಲಾಗಿದೆ ಎಂದು ಆರೋಪಿಸಿದ್ದರು.
Delhi High Court sets aside the suspension of seven BJP MLAs from Delhi's Legislative Assembly for an indefinite time. They had challenged their suspension before the High Court. These MLAs were suspended on February 16 over a disturbance caused during an address by the LG Vinai… pic.twitter.com/f7wfN7a6jB
— ANI (@ANI) March 6, 2024
ಫೆಬ್ರವರಿ 15 ರಂದು ಎಎಪಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುವ ಲೆಫ್ಟಿನೆಂಟ್ ಗವರ್ನರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಶಾಸಕರು ತಮ್ಮ ಅಮಾನತು ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ವಿವಾದಾತ್ಮಕ ವಾತಾವರಣವನ್ನು ಸೂಚಿಸುವ ಇತ್ತೀಚಿನ ರಾಜಕೀಯ ಕಾಮೆಂಟ್ಗಳು ಮತ್ತು ಸಂದೇಶಗಳ ವಿರುದ್ಧ ಪ್ರತಿಭಟಿಸಿದರು. ಆದರೆ ಫೆಬ್ರವರಿ 19 ರಂದು, ಶಾಸಕರ ಹಿರಿಯ ವಕೀಲ ಜಯಂತ್ ಮೆಹ್ತಾ ಅವರು ಅಮಾನತು ಅಸಾಂವಿಧಾನಿಕ ಮತ್ತು ನಿಯಮಗಳಿಗೆ ವಿರುದ್ಧವಾಗಿದ್ದು, ಕಲಾಪದಲ್ಲಿ ಭಾಗವಹಿಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ವಾದಿಸಿದ್ದರು.
ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್; ಆ ಒಂದು ಫೋಟೋ ನೋಡಿ ಕೋಪಗೊಂಡ ಅರ್ಷದ್ ವಾರ್ಸಿ ಪತ್ನಿ!