More

    ಪಂಜಾಬ್ ಸಿಎಂಗೆ ಹೆಣ್ಣು ಮಗು ಜನನ; ಇಡಿ ಕಸ್ಟಡಿಯಿಂದಲೇ ಅಭಿನಂದನೆ ತಿಳಿಸಿದ ಅರವಿಂದ್ ಕೇಜ್ರಿವಾಲ್!

    ನವದೆಹಲಿ: ಇಂದು ಪಂಜಾಬ್ ಸಿಎಂ ಭಗವಂತ್ ಮಾನ್​ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಈ ಖುಷಿ ಸಂದರ್ಭದಲ್ಲಿರುವ ಎಎಪಿ ನಾಯಕನಿಗೆ ದೆಹಲಿಯ ಇಡಿ ಕಸ್ಟಡಿಯಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ವಿಶೇಷ ಅಭಿನಂದನೆ ತಿಳಿಸಿದರು. ಭಗವಂತ್ ಮಾನ್ ಅವರ ಪತ್ನಿಯನ್ನು ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವೇಳೆ ದಂಪತಿಗೆ ಪುತ್ರಿಯ ಜನನವಾಗಿದೆ.

    ಇದನ್ನೂ ಓದಿ: ಮಾಜಿ ಸಿಎಂ ಎಚ್ಡಿಕೆ ಸಂಧಾನ ಸಫಲ: ಜೆಡಿಎಸ್‌ಗೆ ಮರಳಿದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ

    ಮದ್ಯದ ನೀತಿ ಪ್ರಕರಣದ ವಿಚಾರಣೆಯ ನಂತರ ನ್ಯಾಯಾಲಯದಿಂದ ಹೊರಬರುತ್ತಿದ್ದ ಕೇಜ್ರಿವಾಲ್, “ಭಗವಂತ್ ಮಾನ್ ದಂಪತಿಗೆ ಹೆಣ್ಣು ಮಗುವಾಗಿದೆ. ಅವರಿಗೆ ನಾನು ಅಭಿನಂದಿಸುತ್ತೇನೆ” ಎಂದರು. ಇನ್ನು ಈ ವಿಷಯವನ್ನು ಎಕ್ಸ್​ನಲ್ಲಿ ತಿಳಿಸಿದ ( ಈ ಹಿಂದೆ ಟ್ವಿಟರ್) ಭಗವಂತ್ ಮಾನ್, “ದೇವರು ಮಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ” ಎಂದರು.

    ಪಂಜಾಬ್ ಸಿಎಂಗೆ ಹೆಣ್ಣು ಮಗು ಜನನ; ಇಡಿ ಕಸ್ಟಡಿಯಿಂದಲೇ ಅಭಿನಂದನೆ ತಿಳಿಸಿದ ಅರವಿಂದ್ ಕೇಜ್ರಿವಾಲ್!

    ಈ ಮಧ್ಯೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ ಬಂಧನವನ್ನು ಏಪ್ರಿಲ್ 1ರವರೆಗೆ 4 ದಿನಗಳವರೆಗೆ ವಿಸ್ತರಿಸಿದೆ. ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾರ ಮುಂದೆ ಹಾಜರುಪಡಿಸಲಾಯಿತು, ಅಲ್ಲಿ ತನಿಖಾ ಸಂಸ್ಥೆಯು ಕೇಜ್ರಿವಾಲ್​ರನ್ನು ಏಳು ದಿನಗಳ ಕಾಲ ಕಸ್ಟಡಿಗೆ ಕೋರಿದ್ದು, ಪ್ರಕರಣದೊಂದಿಗೆ ಸಂಬಂಧ ಹೊಂದಿರುವ ಕೆಲವು ವ್ಯಕ್ತಿಗಳನ್ನು ಕರೆಸಬೇಕಿದೆ ಎಂದು ತಿಳಿಸಿದೆ,(ಏಜೆನ್ಸೀಸ್).

    ಅಂದು RCB 263… ಇಂದು SRH 277! ಎರಡು ದಾಖಲೆಯ ಸಮಯದಲ್ಲೂ ತಂಡದಲ್ಲಿದ್ದ ಏಕೈಕ ಆಟಗಾರ ಇವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts