More

    ಹೀಗೊಂದು ಅಳಿಲುಸೇವೆ : ಲಸಿಕಾ ಕೇಂದ್ರಕ್ಕೆ ಉಚಿತ ಬಸ್​ ಸೌಲಭ್ಯ!

    ನವದೆಹಲಿ : ಕರೊನಾ ಮಹಾಮಾರಿಯಿಂದ ಸಂರಕ್ಷಣೆ ಒದಗಿಸುವ ಲಸಿಕೆಗಳನ್ನು ಆದಷ್ಟು ಬೇಗ ಹೆಚ್ಚು ಜನರಿಗೆ ತಲುಪಿಸುವ ಪ್ರಯತ್ನ ದೇಶಾದ್ಯಂತ ನಡೆಯುತ್ತಿದೆ. ಈ ಅಭಿಯಾನಕ್ಕೆ ಬೆಂಬಲ ಒದಗಿಸಲು ದೆಹಲಿಯ ವಸಂತ ವಿಹಾರದ ಆಮ್​ ಆದ್ಮಿ ಪಾರ್ಟಿಯ ಕಾರ್ಯಕರ್ತ ಅಭಿಷೇಕ್​ ಜೈನ್​ ಹೊಸ ಉಪಾಯ ಹುಡುಕಿದ್ದಾರೆ. ಹಲವಾರು ಜನವಸತಿ ಶಿಬಿರಗಳ ಬಡಜನರಿಗೆ ಸರ್ಕಾರಿ ಲಸಿಕಾ ಕೇಂದ್ರಗಳಿಗೆ ಹೋಗಿಬರುವ ಅನುಕೂಲಕ್ಕಾಗಿ ಅವರು ಬಸ್​ ಸೇವೆ ಒದಗಿಸುತ್ತಿದ್ದಾರೆ.

    ಈಗಾಗಲೇ 500 ಜನರು ಈ ಬಸ್​ನ ಉಚಿತ ಪಿಕ್​ಅಪ್​ ಮತ್ತು ಡ್ರಾಪ್​ ಸೇವೆಯ ಪ್ರಯೋಜನ ಪಡೆದಿದ್ದು, ಬಡ ನಿವಾಸಿಗಳು ಈ ಪ್ರಯತ್ನವನ್ನು ಪ್ರಶಂಸಿಸಿದ್ದಾರೆ. ವಸಂತ ವಿಹಾರದ ಕೂಲಿ ಕ್ಯಾಂಪ್​, ಶಿವ ಕ್ಯಾಂಪ್, ಸೇವಾ ಕ್ಯಾಂಪ್, ಶ್ರೀ ರಾಮ್​ ಜೆಜೆ ಶಾಸ್ತ್ರಿ ಮಾರ್ಕೆಟ್ ಕ್ಯಾಂಪ್, ನೇಪಾಳಿ ಕ್ಯಾಂಪ್, ವಸಂತ್ ಗಾವ್ ಮುಂತಾದೆಡೆಯಿಂದ ಜನರನ್ನು ಈ ಬಸ್​ ಲಸಿಕಾ ಕೇಂದ್ರಕ್ಕೆ ಒಯ್ಯುತ್ತಾ ಇದೆ ಎನ್ನಲಾಗಿದೆ. (ಏಜೆನ್ಸೀಸ್)

    ಜುಲೈನಿಂದ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಬಾಕಿ ಪಾವತಿ

    ಬಿಟ್ಟುಬಿಡಿ ಎಂದರೂ ಕೇಳದೆ ಮತ್ತಿನಲ್ಲಿದ್ದವನನ್ನು ಯದ್ವಾತದ್ವಾ ಥಳಿಸಿದ್ದ ಪಿಎಸ್​ಐ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts