More

    ಬೀದಿ ನಾಯಿಗಳ ದಾಳಿಗೆ ಜಿಂಕೆ ಮರಿ ಬಲಿ

    ಹೊನ್ನಾವರ: ನೀರು ಕುಡಿಯಲು ಕಾಡಿನಿಂದ ನಾಡಿಗೆ ಬಂದ ಗಂಡು ಜಿಂಕೆ ಮರಿ ಬೀದಿ ನಾಯಿಗಳು ದಾಳಿಗೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಚಂದಾವರ ಅರಣ್ಯ ಪ್ರದೇಶದಲ್ಲಿ ಗುರುವಾರ ನಡೆದಿದೆ. ಚಂದಾವರದ ತೇಬ್ರಿ ಹಳ್ಳಕ್ಕೆ ಗಂಡು ಜಿಂಕೆ ನೀರು ಕುಡಿಯಲು ಬಂದಿತ್ತು. ಈ ವೇಳೆ ಅಲ್ಲಿಯ ಬೀದಿ ನಾಯಿಗಳ ಗುಂಪು ಹಠಾತ್ ದಾಳಿ ನಡೆಸಿದೆ. ಜಿಂಕೆಯ ಹಿಂಗಾಲು ಮತ್ತು ಕುತ್ತಿಗೆ ಭಾಗಕ್ಕೆ ಬಲವಾದ ಗಾಯವಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ಇದರಿಂದ ತಪ್ಪಿಸಿಕೊಂಡು ಓಡಿಹೋಗಲಾಗದೆ ಚಡಪಡಿಸಿ ಸ್ಥಳದಲ್ಲಿ ಸಾವನ್ನಪ್ಪಿದೆ ಎನ್ನಲಾಗಿದೆ. ಚಂದಾವರ ಡಿಆರ್​ಎಫ್​ಒ ಎಸ್.ಐ. ನಾಯ್ಕ, ಅರಣ್ಯ ರಕ್ಷಕರಾದ ನರಸಿಂಹ ಪಟಗಾರ, ರಾಘವೇಂದ್ರ ನಾಯ್ಕ, ಅರಣ್ಯ ವೀಕ್ಷಕ ಸರೇಶ ಭಂಡಾರಿ, ವಾಹನ ಚಾಲಕ ಮಂಜುನಾಥ ನಾಯ್ಕ ಸ್ಥಳಕ್ಕೆ ಭೇಟಿ ನೀಡಿದ್ದು, ಸ್ಥಳೀಯರ ಸಹಾಯದಿಂದ ಜಿಂಕೆ ಮರಿಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts