ಕೋಲಾರ: ಮಳೆಯ ಆರ್ಭಟಕ್ಕೆ ತುಂಬಿ ತುಳುಕುತ್ತಿದ್ದ ಕಾಲುವೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮಹಿಳೆಯೊಬ್ಬರ ಶವ ಇಂದು ಪತ್ತೆಯಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಎ.ಕೊತ್ತೂರಿನ ನಿವಾಸಿ ಅಮರಾವತಮ್ಮ ಮೃತ ಮಹಿಳೆ.
ಗುರುವಾರ ರಾತ್ರಿ ಬೈಕ್ನಲ್ಲಿ ಹಿಂದೆ ಕುಳಿತು ಪ್ರಯಾಣಿಸುತ್ತಿದ್ದಾಗ ಬೈಕ್ ಕಾಲುವೆಗೆ ಜಾರಿದ ಪರಿಣಾಮವಾಗಿ 60 ವರ್ಷ ವಯಸ್ಸಾಗಿದ್ದ ಅಮರಾವತಮ್ಮ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಬೈಕ್ ಚಾಲಕ ಮರದ ಕೊಂಬೆ ಹಿಡಿದು ಅದೃಷ್ಟವಶಾತ್ ಬಚಾವ್ ಆಗಿದ್ದರು. ಅಮರಾವತಮ್ಮ ಅವರ ಶವವು, ನಾಪತ್ತೆಯಾಗಿ 20 ಗಂಟೆಗಳ ಬಳಿಕ ಪತ್ತೆಯಾಗಿದೆ. ಅವರು ನೀರಿಗೆ ಬಿದ್ದಿದ್ದ ಜಾಗದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ. ಕಳೆದ ರಾತ್ರಿಯಿಂದ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ ಪತ್ತೆ ಕಾರ್ಯಾಚರಣೆ ನಡೆಸಿದ್ದರು.
ಕೆಸರಿನಲ್ಲಿ ಸಿಕ್ಕಿಕೊಂಡ ಸಾರಿಗೆ ಬಸ್… ಮಾರ್ಗಮಧ್ಯೆ ಪ್ರಯಾಣಿಕರ ಪರದಾಟ