ಕೆಸರಿನಲ್ಲಿ ಸಿಕ್ಕಿಕೊಂಡ ಸಾರಿಗೆ ಬಸ್​… ಮಾರ್ಗಮಧ್ಯೆ ಪ್ರಯಾಣಿಕರ ಪರದಾಟ

ಬಾಗಲಕೋಟೆ: ಕೆಸರುಗದ್ದೆಯಂತಾಗಿದ್ದ ರಸ್ತೆಯಲ್ಲಿ ಕರ್ನಾಟಕ ವಾಯುವ್ಯ ಸಾರಿಗೆ ಬಸ್​ ಸಿಲುಕಿಕೊಂಡ ಪ್ರಸಂಗ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಬಸ್ಸು ಕೆಸರಿನಿಂದ ಹೊರಬಾರದ ಪರಿಣಾಮ ಪ್ರಯಾಣಿಕರು ಮಾರ್ಗಮಧ್ಯದಲ್ಲಿ ಪರದಾಡುವಂತಾಯಿತು. ಇಳಕಲ್​ ಡಿಪೋ ಬಸ್ಸು, ಇಳಕಲ್ ನಗರದಿಂದ ತೊಂಡಿಹಾಳ ಮಾರ್ಗವಾಗಿ ಅಂಕನಾಳಗೆ ಹೋಗುತ್ತಿತ್ತು. ಮಾರ್ಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಜಿಟಿಜಿಟಿ ಮಳೆಯಿಂದಾಗಿ ಕೆಸರುಗದ್ದೆಯಂತಾಗಿರುವ ಇಳಕಲ್ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿತು. ಬಸ್ಸನ್ನು ಕೆಸರಿನಿಂದ ಹೊರಕ್ಕೆ ತರಲು ಚಾಲಕ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಈ ಕಾರಣದಿಂದ ಪ್ರಯಾಣಿಕರು ಬಸ್ … Continue reading ಕೆಸರಿನಲ್ಲಿ ಸಿಕ್ಕಿಕೊಂಡ ಸಾರಿಗೆ ಬಸ್​… ಮಾರ್ಗಮಧ್ಯೆ ಪ್ರಯಾಣಿಕರ ಪರದಾಟ