More

    ಬಿಜೆಪಿ ಪ್ರಕೋಷ್ಠಗಳ ದಾವಣಗೆರೆ ಜಿಲ್ಲಾ ಸಮಾವೇಶ 14ಕ್ಕೆ

    ದಾವಣಗೆರೆ: ಬಿಜೆಪಿಯ ಎಲ್ಲ ಪ್ರಕೋಷ್ಠಗಳ ಜಿಲ್ಲಾ ಸಮಾವೇಶ, ವಿನೋಬನಗರದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಮೇ 14ರಂದು ನಡೆಯಲಿದೆ.

    ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನವಾಗಿ ಪಕ್ಷದ ಸಂಘಟನೆಗಾಗಿ ಈ ಸಮಾವೇಶ ನಡೆಯಲಿದೆ. ಮೇ 7ರಿಂದ ಅಂತ್ಯದವರೆಗೆ ಸಮಾವೇಶ ಸಂಯೋಜನೆಗೊಂಡಿದ್ದು, ಚಿತ್ರದುರ್ಗದಲ್ಲಿ 13ರಂದು ನಡೆಯುತ್ತಿದೆ ಎಂದು ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಹ ಸಂಚಾಲಕ ಡಾ. ಎ.ಎಚ್.ಶಿವಯೋಗಿಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ಸುನಿಲ್‌ಕುಮಾರ್ ಸಮಾವೇಶ ಉದ್ಘಾಟಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಎಸ್.ವಿ.ರಾಮಚಂದ್ರ, ಎನ್.ಲಿಂಗಣ್ಣ, ಎಂಎಲ್ಸಿ ಕೆ.ಎಸ್.ನವೀನ್ ರಾಜ್ಯ ಕಾರ್ಯದರ್ಶಿ ಸುಧಾ ಜಯರುದ್ರೇಶ್, ದೂಡಾ ಅಧ್ಯಕ್ಷ ಕೆ.ಎಂ.ಸುರೇಶ್ ಹಾಗೂ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳು, ಪ್ರಭಾರಿಗಳು ಸೇರಿ 600ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ.

    ಪಕ್ಷದ ಕೇಂದ್ರ ಘಟಕದ ನಿರ್ಣಯದಂತೆ 24 ಪ್ರಕೋಷ್ಠಗಳನ್ನು ರಚಿಸಲಾಗಿದ್ದು, ಪ್ರತಿ ಪ್ರಕೋಷ್ಠದಲ್ಲಿ ರಾಜ್ಯ ಸಮಿತಿಯಲ್ಲಿ 11, ಜಿಲ್ಲಾ ಸಮಿತಿಯಲ್ಲಿ 9 ಹಾಗೂ ಮಂಡಲ ಸಮಿತಿಯಲ್ಲಿ 7 ಸದಸ್ಯರಿರುತ್ತಾರೆ. ಜಿಲ್ಲೆಯಲ್ಲಿ ಎಲ್ಲ ಪ್ರಕೋಷ್ಠಗಳು ರಚನೆಯಾಗಿದ್ದು ಮಂಡಲ ಸಮಿತಿಗಳು ರಚನೆಯಾಗುತ್ತಿವೆ ಎಂದು ಅವರು ತಿಳಿಸಿದರು.

    ರಾಜಕಾರಣ ನಿಂತ ನೀರಲ್ಲ. ಬಿಜೆಪಿ ಪಕ್ಷವನ್ನು ಕಾರಣಾಂತರದಿಂದ ತೊರೆದವರು ಮರಳಬಹುದು. ಅವರಿಂದ ಕಾನೂನಾತ್ಮಕ ಸಮಸ್ಯೆಯಾಗಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಆಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts