More

    ದಾವಣಗೆರೆ ಗಾಂಧಿ ಭವನದಲ್ಲಿ ಗ್ರಂಥಾಲಯ ಆರಂಭ

    ದಾವಣಗೆರೆ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿಂತನೆ, ಆದರ್ಶಗಳ ಕುರಿತಾದ ಪುಸ್ತಕಗಳೂ ಸೇರಿ ವಿವಿಧ ವಿಷಯಗಳ ಗ್ರಂಥಗಳಿರುವ ಗ್ರಂಥಾಲಯವನ್ನು ಗಾಂಧಿ ಭವನದಲ್ಲಿ ಆರಂಭಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದರು.
     ನಗರ ಹೊರ ವಲಯದಲ್ಲಿರುವ ರಾಮನಗರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಾಣ ಮಾಡಿರುವ ಗಾಂಧಿ ಭವನದಲ್ಲಿ ಗುರುವಾರ, ಗ್ರಂಥಾಲಯ ಇಲಾಖೆಯಿಂದ ನಗರ ಗ್ರಂಥಾಲಯದ ಶಾಖೆಯನ್ನು ಆರಂಭಿಸಿ ಮಾತನಾಡಿದರು.
     ಇತಿಹಾಸ, ಸಾಹಿತ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕಗಳು ಗ್ರಂಥಾಲಯದಲ್ಲಿದ್ದು ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
     ಗಾಂಧೀಜಿ ಚಿಂತನೆಗಳನ್ನು ಜನರಲ್ಲಿ ಬೆಳೆಸಬೇಕೆಂಬ ಉದ್ದೇಶದಿಂದ ನಗರದಲ್ಲಿ ಸುಂದರವಾದ ಗಾಂಧಿ ಭವನ ನಿರ್ಮಾಣ ಮಾಡಲಾಗಿದೆ. ಕತೆ, ಕಾದಂಬರಿ, ಪಠ್ಯಕ್ರಮದ ಪುಸ್ತಕಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ. ಜತೆಗೆ ರಾಜ್ಯಮಟ್ಟದ ಪ್ರಮುಖ ದಿನಪತ್ರಿಕೆಗಳು, ಸ್ಥಳೀಯ ಪತ್ರಿಕೆಗಳೂ ಲಭ್ಯ ಇವೆ ಎಂದು ಹೇಳಿದರು.
     ಗ್ರಂಥಾಲಯವು ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು ಪ್ರಶಾಂತತೆ ಕಾಪಾಡಿಕೊಳ್ಳಬೇಕು. ಪ್ರತಿ ಸೋಮವಾರ, ಎರಡನೇ ಮಂಗಳವಾರ, 4 ನೇ ಶನಿವಾರ ಹಾಗೂ ವಿಶೇಷ ಸರ್ಕಾರಿ ರಜಾ ದಿನಗಳಂದು ಮಾತ್ರ ಗ್ರಂಥಾಲಯಕ್ಕೆ ರಜೆ ಇರುತ್ತದೆ. ಉಳಿದಂತೆ ಪ್ರತಿ ನಿತ್ಯ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಗ್ರಂಥಾಲಯ ಓದುಗರಿಗೆ ತೆರೆದಿರುತ್ತದೆ ಎಂದು ಮಾಹಿತಿ ನೀಡಿದರು.
     ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ನಗರ ಕೇಂದ್ರ ಗ್ರಂಥಾಲಯ ಉಪ ನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ, ಆವರಗೆರೆ ರುದ್ರಮುನಿ, ಐಗೂರು ತಿಮ್ಮಣ್ಣ, ಹನುಮನಹಳ್ಳಿ ರಾಜು, ಪಿ. ಆಂಜಿನಪ್ಪ, ಬಸವರಾಜು, ಉಷಾರಾಣಿ, ನೀಲಕಂಠಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts