More

    ನೀರು ಬಿಡುವ ನಿರ್ಧಾರದಲ್ಲಿ ಹೊಸದೇನೂ ಇಲ್ಲ

    ದಾವಣಗೆರೆ : ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಸರದಿಯಂತೆ ನೀರು ಹರಿಸುವ ಸರ್ಕಾರದ ನಿರ್ಧಾರ ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ ಎಂದು ರೈತ ಮುಖಂಡರಾದ ಕೊಳೇನಹಳ್ಳಿ ಬಿ.ಎಂ. ಸತೀಶ್ ಮತ್ತು ಬೆಳವನೂರು ನಾಗೇಶ್ವರರಾವ್ ಪ್ರತಿಕ್ರಿಯಿಸಿದ್ದಾರೆ.
     ಈ ಬಗ್ಗೆ ಭದ್ರಾ ಯೋಜನೆ ನೀರಾವರಿ ಸಲಹಾ ಸಮಿತಿ ಸದಸ್ಯಕಾರ್ಯದರ್ಶಿ ಸುಜಾತಾ ನೀಡಿರುವ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಇದು ಆಫ್ ಆ್ಯಂಡ್ ಆನ್ ಪದ್ಧತಿಯಾಗಿದ್ದು ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
     ನಮಗೆ ಆಫ್ ಆ್ಯಂಡ್ ಆನ್ ಪದ್ಧತಿ ಬೇಡ. ಇದರಿಂದ ಇಂಟರ್ನಲ್ ರೊಟೇಶನ್ ಸೇರಿ 20 ದಿನ ನೀರು ಸಿಗುವುದಿಲ್ಲ. ಆಗ ಭತ್ತದ ಬೆಳೆ ಒಣಗಿ ನಾಶವಾಗುತ್ತದೆ. ರಾಜ್ಯ ಸರ್ಕಾರ ತಾನು ನೀಡಿದ ಆದೇಶದಂತೆ ನಿರಂತರ 100 ದಿನ ನೀರು ಹರಿಸಬೇಕೆಂದು ಆಗ್ರಹಿಸಿ 10 ದಿನಗಳಿಂದ ಹೋರಾಟ ನಡೆದಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಿಂಚಿತ್ತೂ ಮನ್ನಣೆ ನೀಡಿಲ್ಲ ಎಂದು ಟೀಕಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts