ಹುಬ್ಬಳ್ಳಿ : ಇಲ್ಲಿನ ಸಂತೋಷ ನಗರದ ಶಕ್ತಿ ಕಾಲನಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏ. 11ರಂದು ಸಂಜೆ 6 ರಿಂದ ರಾತ್ರಿ 7.30ರವರೆಗೆ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ದಾಸವಾಣಿಯನ್ನು ಅನನ್ಯ ಮತ್ತು ಲಾವಣ್ಯ ಪಾಮಡಿ ನಡೆಸಿಕೊಡುವರು.
ತಬಲಾ ಸಾಥಿದಾರರಾಗಿ ಮನುಕುಮಾರ ಹಿರೇಮಠ, ದಾಮೋದರ ಪಾಮಡಿ ಮತ್ತು ಹಾಮೋನಿಯಂ ಸಾಥಿದಾರರಾಗಿ ವಿಜಯಕುಮಾರ ಅರ್ಕಸಾಲಿ ಪಾಲ್ಗೊಳ್ಳುವರು ಎಂದು ಶ್ರೀಮಠದ ಅಧ್ಯಕ್ಷ ಗೋವಿಂದಾಚಾರ್ಯ ತಿಳಿಸಿದ್ದಾರೆ.