ಹೈದರಾಬಾದ್: ಪೊಲೀಸರು ಆಡಳಿತ ಪಕ್ಷದ ತುತ್ತೂರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ ರಾಜಾ ಸಿಂಗ್ಗೆ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ಶಾಸಕರು ಅನವಶ್ಯಕವಾಗಿ ಪೊಲೀಸರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಪೊಲೀಸರ ವಿರುದ್ಧ ಮಾತನಾಡಿದರೆ ಪ್ರಕರಣ ದಾಖಲಿಸಲಾಗುವುದು. ರಾಜಾ ಸಿಂಗ್ ಹೇಳಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಜ್ಜನರ್ ಹೇಳಿದ್ದಾರೆ. ಪ್ರಸ್ತುತ ಇನ್ಸ್ಟೆಂಟ್ ಲೋನ್ ಆ್ಯಪ್ಗಳ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಉದ್ದೇಶಿಸಿ ಬಿಜೆಪಿ ಶಾಸಕ ನೀಡಿದ್ದ ಹೇಳಿಕೆಗೆ ಸಜ್ಜನರ್ ಸರಿಯಾದ ತಿರುಗೇಟು ನೀಡಿದರು.
ಇದನ್ನೂ ಓದಿ: 28 ವರ್ಷ ಬಳಿಕ ದೊರೆತ ನ್ಯಾಯ; ಫಾದರ್ ಥಾಮಸ್ ಕೊಟ್ಟೂರ್, ಸಿಸ್ಟರ್ ಸೆಫಿ ಅಪರಾಧಿಗಳೆಂದ ಕೋರ್ಟ್
ಇದೇ ವೇಳೆ ಇನ್ಸ್ಟೆಂಟ್ ಲೋನ್ ಆ್ಯಪ್ ಹಗರಣ ಕುರಿತು ಮಾತನಾಡಿದ ಅವರು ಲೋನ್ ಆ್ಯಪ್ಗಳ ವಿರುದ್ಧ ದೂರುಗಳನ್ನು ಸ್ವೀಕರಿಸಿದ್ದೇವೆ. ಕ್ಯಾಶ್ ಮಾಮಾ, ಲೋನ್ ಝೋನ್ ಮತ್ತು ಧನಾಧನ್ ಹೆಸರಿನಲ್ಲಿ ಸಾಲ ಕೊಡಲಾಗುತ್ತದೆ. ಇನ್ಸ್ಟೆಂಟ್ ಲೋನ್ಸ್ ಬಗ್ಗೆ ಆರ್ಬಿಐ ಸಹ ಗಂಭೀರವಾಗಿ ಪರಿಗಣಿಸಿದೆ. ರಾಯದುರ್ಗದಲ್ಲಿ ಎರಡು ಕಂಪನಿಗಳನ್ನು ಗುರುತಿಸಲಾಗಿದ್ದು, ಸುಮಾರು 110ಕ್ಕೂ ಹೆಚ್ಚು ಟೆಲಿಕಾಲರ್ಸ್ ಕೆಲಸ ಮಾಡುತ್ತಿದ್ದಾರೆ. ದಾಳಿ ವೇಳೆ 1.52 ಕೋಟಿ ಮೌಲ್ಯದ ಲ್ಯಾಪ್ಟಾಪ್, 22 ಫೋನ್ ಮತ್ತು 18 ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದೇವೆಂದು ತಿಳಿಸಿದರು.
ಇನ್ಸ್ಟೆಂಟ್ ಲೋನ್ ಆ್ಯಪ್ಸ್ ಮೂಲಕ ನಡೆಯುತ್ತಿರುವ ಹಗರಣ ಕುರಿತು ಮಾತನಾಡಿರುವ ಸಜ್ಜನರ್, ಇಂತಹ ಆ್ಯಪ್ಗಾಗಿ ಕೆಲಸ ಮಾಡುತ್ತಿರುವ ಕಾಲ್ ಸೆಂಟರ್ಗಳನ್ನು ಸೀಜ್ ಮಾಡಿದ್ದೇವೆ. ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ 1,100 ಉದ್ಯೋಗಿಗಳಿಗೆ ನೋಟಿಸ್ ನೀಡಿದ್ದೇವೆ ಬೇಗುಂಪೇಟ್ ಮತ್ತು ಪಂಜಗುಟ್ಟ ಕಾಲ್ ಸೆಂಟರ್ಗಳ ಮೇಲೆ ದಾಳಿ ಮಾಡಿದಾಗ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!
ಇಂತಹ ಲೋನ್ ಆ್ಯಪ್ಗಳಿಂದ ದೇಶಾದ್ಯಂತ ಕಿರುಕುಳ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಇಂತಹ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ. ಒಂದು ವೇಳೆ ಏನೇ ಸಮಸ್ಯೆಯಾದರೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ಎಂದು ಸಜ್ಜನರ್ ಮನವಿ ಮಾಡಿದರು. (ಏಜೆನ್ಸೀಸ್)
‘ಸಜ್ಜನರ’ ಕೆಲಸ ಎಂದರೆ ಇದು.. ಬಾಂಗ್ಲಾ ಟು ಹೈದರಾಬಾದ್, ಆ ರಾತ್ರಿ ಏನಾಯ್ತು?
ರೂಪಾಂತರಿ ಭಯ ಬೇಡ; ಹೊಸ ಪ್ರಭೇದ ವೈರಸ್ ಹೆಚ್ಚು ತೀಕ್ಷ್ಣತೆ ಕಂಡಿಲ್ಲ ಎಂದು ತಜ್ಞರ ಅಭಿಮತ