More

    ಸುರೇಶ್​ ರೈನಾಗೆ ಬೆಂಬಲ ಘೋಷಿಸಿದ ಚೆನ್ನೈ ಸೂಪರ್​ ಕಿಂಗ್ಸ್​..!

    ಬೆಂಗಳೂರು: ಸಿಎಸ್​ಕೆ ತಂಡದ ಪ್ರಮುಖ ಆಟಗಾರನಾಗಿದ್ದ ಸುರೇಶ್​ ರೈನಾ ಅವರಿಗೆ ನಾಯಕ ಎಂಎಸ್​ ಧೋನಿ ನಂತರದ ಸ್ಥಾನ ನೀಡಲಾಗಿತ್ತು. ವೈಯಕ್ತಿಕ ಕಾರಣಗಳಿಂದಾಗಿ ತಂಡ ತೊರೆದು ತವರು ಸೇರಿಕೊಂಡಿರುವ ರೈನಾ ವಿರುದ್ಧ ಸೋಮವಾರವಷ್ಟೇ ತಂಡದ ಮಾಲೀಕ ಶ್ರೀನಿವಾಸನ್​ ಗುಡುಗಿ, ಬಳಿಕ ಬೆಂಬಲ ನೀಡುವುದಾಗಿ ಉಲ್ಟಾ ಹೊಡೆದಿದ್ದರು. ಕಠಿಣ ಸ್ಥಿತಿಯಲ್ಲಿರುವ ಚಿನ್ನ ತಲಾ ಕುಟುಂಬಕ್ಕೆ ನಮ್ಮ ಬೆಂಬಲ ಎಂದು ತನ್ನ ಅಧಿಕೃತ ಟ್ವಿಟರ್​ನಲ್ಲಿ ಟ್ವೀಟ್​ ಮಾಡುವ ಮೂಲಕ ರೈನಾಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಿದೆ.

    ಇದನ್ನೂ ಓದಿ: ಐಪಿಎಲ್ ಆಡಲು ದುಬೈಗೆ ಬಂದಿಳಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು…

    ಮಂಗಳವಾರವಷ್ಟೇ ತಮ್ಮ ಸಹೋದರ ಸಂಬಂಧಿ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ರೈನಾ, ನಮ್ಮ ಕುಟುಂಬಕ್ಕೆ ಏನಾಗಿದೆ ಎಂದು ಸರಣಿ ಟ್ವೀಟ್​ ಮಾಡಿದ್ದರು. ಜತೆಗೆ ಘಟನೆ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಪಂಜಾಬ್​ ಸಿಎಂ ಹಾಗೂ ಪೊಲೀಸರಿಗೆ ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ. ಇದೀಗ ಚೆನ್ನೈ ತಂಡ ಟ್ವೀಟ್​ ಮೂಲಕ ರೈನಾಗೆ ಬೆಂಬಲ ಘೋಷಿಸಿದೆ.

    ಇದನ್ನೂ ಓದಿ: VIDEO: ಆಟಗಾರರು ಸಮಯ ಕಳೆಯಲು ವಿಶೇಷ ಕೊಠಡಿ ನಿರ್ಮಿಸಿದ ಮುಂಬೈ ಇಂಡಿಯನ್ಸ್..!

    2008 ರಿಂದಲೂ ಸಿಎಸ್​ಕೆ ತಂಡದ ಭಾಗವಾಗಿರುವ ರೈನಾ, ಉಪ-ನಾಯಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ. ಆಗಸ್ಟ್​ 29 ರಂದು ವೈಯಕ್ತಿಕ ಕಾರಣ ನೀಡಿ ರೈನಾ ತಂಡ ತೊರೆದಿದ್ದರು. ಇದು 3 ಬಾರಿ ಚಾಂಪಿಯನ್​ ಸಿಎಸ್​ಕೆ ತಂಡಕ್ಕೆ ಭಾರಿ ಹಿನ್ನಡೆವುಂಟಾಗಿದೆ. ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ ಆಧಾರ ಸ್ತಂಭವಾಗಿದ್ದರು ರೈನಾ. ಜತೆಗೆ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ರನ್​ (5368) ಗಳಿಸಿದ 2ನೇ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ. ಜತೆಗೆ 12 ಐಪಿಎಲ್​ನಲ್ಲೂ ಪ್ಲೇ ಆಫ್ ಹಂತಕ್ಕೇರಿದ ಸಾಧನೆ ಮಾಡಿರುವ ಸಿಎಸ್​ಕೆ 8 ಬಾರಿ ಫೈನಲ್​ ಪ್ರವೇಶಿಸಿದ ದಾಖಲೆ ಹೊಂದಿದೆ.

    ಐಪಿಎಲ್​ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೂ ಇದೆ ಅವಕಾಶ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts