ಶಿವಮೊಗ್ಗ: ಇಲ್ಲಿ ದನಗಳ್ಳರನ್ನು ಗೋಪ್ರೇಮಿಗಳು ಅಕ್ಷರಶಃ ಹಿಮ್ಮೆಟ್ಟಿಸಿದ್ದಾರೆ. ಅರ್ಥಾತ್, ದನಗಳನ್ನು ಕದ್ದೊಯ್ಯಲು ಬಂದ ಕಳ್ಳರು ಕಾರನ್ನು ತಿರುಗಿಸಲೂ ಆಗದೆ ರಿವರ್ಸ್ ಗೇರ್ನಲ್ಲೇ ಚಲಾಯಿಸಿಕೊಂಡು ಹೋಗಿ ಪರಾರಿಯಾಗಿದ್ದಾರೆ. ಈ ದೃಶ್ಯದ ವಿಡಿಯೋ ತುಣುಕು ಇದೀಗ ವೈರಲ್ ಆಗಿದ್ದು, ದನಗಳ್ಳರ ಪರಾರಿ ವಿಷಯ ಬೆಳಕಿಗೆ ಬಂದಿದೆ.
ಶಿವಮೊಗ್ಗದ ತೀರ್ಥಹಳ್ಳಿಯ ಕೊಪ್ಪ ಸರ್ಕಲ್ನಲ್ಲಿ ರಾತ್ರಿ ದನಗಳನ್ನು ಕದ್ದೊಯ್ಯಲು ಯತ್ನಿಸುತ್ತಿದ್ದಾಗ ಅದೇ ಸಮಯಕ್ಕೆ ಆ ದಾರಿಯಲ್ಲಿ ಸಾಗುತ್ತಿದ್ದ ಸುದೀಪ್ ಶೆಟ್ಟಿ ಹಾಗೂ ಜಾವೀದ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರನ್ನು ತಿರುಗಿಸಲು ಆಗದ್ದರಿಂದ ಹಸುಗಳನ್ನು ಅಲ್ಲೇ ಬಿಟ್ಟ ದನಗಳ್ಳರು ರಿವರ್ಸ್ ಗೇರ್ನಲ್ಲೇ ಚಲಾಯಿಸಿಕೊಂಡು ಹಿಂದಕ್ಕೆ ಹೋಗಿದ್ದಾರೆ. ಆದರೂ ಬಿಡದ ಸುದೀಪ್-ಜಾವೀದ್ ಅವರನ್ನು ಚೇಸ್ ಮಾಡಿದ್ದಾರೆ.
ಇದನ್ನೂ ಓದಿ: ಬರಲಿದೆ ಮತ್ತೊಂದು ಭೀಕರ ರೋಗ!: ಕರೊನಾ ಪೂರ್ತಿ ಹೋಗಲು ವರ್ಷಗಳೆಷ್ಟು ಬೇಕು ಗೊತ್ತಾ?; ಇಲ್ಲಿದೆ ಭವಿಷ್ಯ..
ಹೀಗೆ ಸುಮಾರು ಒಂದು ಕಿಲೋಮೀಟರ್ನಷ್ಟು ದೂರ ರಿವರ್ಸ್ನಲ್ಲೇ ಹೋದ ದನಗಳ್ಳರು, ಕೊನೆಗೆ ಸುದೀಪ್-ಜಾವೀದ್ ಇದ್ದ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಅಂದಹಾಗೆ ಈ ಘಟನೆ ಮೊನ್ನೆ ರಾತ್ರಿ ನಡೆದಿದ್ದು, ಅದರ ವಿಡಿಯೋ ತುಣುಕು ವೈರಲ್ ಆಗಿ ಪ್ರಕರಣ ಇದೀಗ ಎಲ್ಲರ ಗಮನ ಸೆಳೆಯಲಾರಂಭಿಸಿದೆ.
ತೀರ್ಥಹಳ್ಳಿ ಪಟ್ಟಣದಲ್ಲಿ ದನಗಳನ್ನು ಕಳ್ಳತನ ಮಾಡುವಾಗ ಕಳ್ಳರ ಕಾರನ್ನು ಅಡ್ಡಗಟ್ಟಿದ ಯುವಕರು. ಇನ್ನು ಕರೊನಾ ಲಾಕ್ಡೌನ್ ಸಂದರ್ಭದಲ್ಲಿ ಮಲೆನಾಡಿನಲ್ಲಿ ದನಗಳವು ಪ್ರಕರಣ ಹೆಚ್ಚಾಗುತ್ತಿದ್ದು, ರಾತ್ರಿ ದನಗಳನ್ನು ಕದ್ದು ಕಾರಿನಲ್ಲಿ ತುಂಬಿಸಿಕೊಂಡು ಹೋಗುವವರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ರಾಜ್ಯದಲ್ಲಿ ಮತ್ತೆ ಒಂದು ವಾರ ಲಾಕ್ಡೌನ್ ವಿಸ್ತರಣೆ: ಸಿಎಂ ಬಿಎಸ್ವೈ ಘೋಷಣೆ
ಫಸ್ಟ್ ಡೋಸ್ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!