ರಾಯ್ಪುರ: ಚಿನ್ನ, ಬೆಳ್ಳಿ, ಹಣವನ್ನೆಲ್ಲ ಕಳ್ಳತನ ಮಾಡುವುದನ್ನು ನೋಡಿರುತ್ತೀರಿ. ಆದರೆ ಇದೊಂದು ಗ್ರಾಮದಲ್ಲಿ ಹಸುವಿನ ಸಗಣಿಯನ್ನೇ ಕಳ್ಳತನ ಮಾಡಲಾಗಿದೆಯಂತೆ! ಒಂದೇ ರಾತ್ರಿಯಲ್ಲಿ ಬರೋಬ್ಬರಿ 800 ಕೆಜಿ ಸಗಣಿ ಕಳ್ಳತನವಾಗಿದ್ದು, ಈ ಸಂಬಂಧ ಪೊಲೀಸ್ ಪ್ರಕರಣವೂ ದಾಖಲಾಗಿದೆ.
ಚತ್ತೀಸ್ಗಢದ ಡಿಪ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಇಂತಹ ಕಳ್ಳತನವಾಗಿದೆ. ಜೂನ್ 8ರ ರಾತ್ರಿ ಯಾರೋ ಕಳ್ಳರು ಪೂರ್ತಿ ಗ್ರಾಮದ ಎಲ್ಲ ಹಸುಗಳ ಸಗಣಿಯನ್ನು ಕದ್ದಿದ್ದಾರಂತೆ. ಈ ವಿಚಾರವಾಗಿ ಅದೇ ಗ್ರಾಮದ ಸಂಘಟನೆಯೊಂದರ ಮುಖ್ಯಸ್ಥ ಡಿಪ್ಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಾಮಧೇಯರ ಮೇಲೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಹುಡುಕಾಟದಲ್ಲಿದ್ದಾರೆ.
ಅಷ್ಟಕ್ಕೂ ಈ ಗ್ರಾಮದಲ್ಲಿ ಸಗಣಿ ಕಳ್ಳತನವಾಗಲು ಒಂದು ಕಾರಣವಿದೆಯಂತೆ. ಚತ್ತೀಸ್ಗಢದಲ್ಲಿ 2020ರಲ್ಲಿ ಭೂಪೇಶ್ ಬಾಗೆಲ್ ಸರ್ಕಾರವು ಗೋಧನ್ ನ್ಯಾಯ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆಯಲ್ಲಿ ಕೃಷಿಕರು, ಹೈನುಗಾರಿಕೆ ಮಾಡುವವರಿಂದ ಸಗಣಿಯನ್ನು ಕೆಜಿಗೆ 2 ರೂಪಾಯಿಯಂತೆ ಖರೀದಿಸಿ, ಅದರಿಂದ ಗೊಬ್ಬರ ತಯಾರಿಸಿ ಕಡಿಮೆ ಬೆಲೆಯಲ್ಲಿ ರೈತರಿಗೆ ಮಾರಾಟ ಮಾಡಲಾಗುವುದು. ಆ ಲೆಕ್ಕದಲ್ಲಿ 800 ಕೆಜಿ ಸಗಣಿ ಕದ್ದಿರುವ ಕಳ್ಳರು ಅದರಿಂದ 1600 ರೂಪಾಯಿ ಗಳಿಸಬಹುದು. (ಏಜೆನ್ಸೀಸ್)
‘ಕರೊನಾ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಬಹುದು’ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ
ವಾಟ್ಸ್ಆ್ಯಪ್ ಸ್ಟೇಟಸ್ನಿಂದಾಗಿ ನಡೆದೇ ಹೋಯಿತು ಭಯಾನಕ ಕೊಲೆ! ತಲೆ ಮೇಲೆ ಕಲ್ಲು ಎತ್ತಾಕಿದ್ದ ಆರೋಪಿಗಳು ಅಂದರ್
ಟ್ರಕ್ ಓಡಿಸುತ್ತಲೇ ಓರಲ್ ಸೆಕ್ಸ್! ಮುಂದಾಗಿದ್ದು ಏನೆಂದು ಕೇಳಿದರೆ ಶಾಕ್ ಆಗ್ತೀರ!