ಬೆಂಗಳೂರು: ಕರೊನಾ ಕೋವಿಡ್ 19 ವೈರಸ್ ಸೋಂಕು ಆಗಸ್ಟ್ ಅಂತ್ಯಕ್ಕೆ ನಿವಾರಣೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ಅಲ್ಲ, ಸೆಪ್ಟೆಂಬರ್ ಕಳೆದ್ರೂ ಸೋಂಕು ಜಗತ್ತಿನಿಂದ ಮರೆಯಾಗೋದು ಕಷ್ಟವೇ. ಈಗಾಗಲೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದ್ದು, ಸೆಪ್ಟೆಂಬರ್ ಕೊನೆಯ ವೇಳೆಗೆ ದುಪ್ಪಟ್ಟಾಗಬಹುದು ಎಂದು ಪರಿಣತರು ಅಂದಾಜಿಸಿದ್ದಾರೆ!
ಈ ಸಂಬಂಧ, ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯರಾಗಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಅವರು ದಿಗ್ವಿಜಯ ನ್ಯೂಸ್ ಜತೆಗೆ ಮಾತನಾಡಿದ್ದು, ಸದ್ಯ ಈ ಸೋಂಕು ಮರೆಯಾಗಲ್ಲ. ಹಾಗಂತ ಸೋಂಕಿನ ಬಗ್ಗೆ ಯಾರೂ ಪ್ಯಾನಿಕ್ ಆಗಬೇಕಾಗಿಲ್ಲ. ರಿಕವರಿ ರೇಟ್ ಚೆನ್ನಾಗಿದ್ದು, 2.4 ಲಕ್ಷ ಜನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿಸಿದ್ದಾರೆ. ಪೂರ್ಣ ವಿವರಕ್ಕೆ ಮೇಲಿನ ವಿಡಿಯೋ ಕ್ಲಿಕ್ ಮಾಡಿ.. (ದಿಗ್ವಿಜಯ ನ್ಯೂಸ್)
ಯಾವ ಜಿಲ್ಲೆಗೆ ಹೋದ್ರೂ ಪಕ್ಷದ ಕಚೇರಿಗೇ ಮೊದ್ಲು ಹೋಗೋದು- ಕಾರ್ಮಿಕ ಸಚಿವ ಹೆಬ್ಬಾರ
‘ಸರ್ಕಾರವೆ ಕಲ್ಲು-ಮಣ್ಣು ಸೇರಿರೋ ರಾಗೀನ ಪೂರೈಸ್ತಿರೋವಾಗ ನಾವೇನು ಮಾಡೋಣ?’