ರಾಯಚೂರು: ಗೌರಿ ಹಬ್ಬದಂದು ಕಾರು ಅಪಘಾತಕ್ಕೀಡಾಗಿ ಸಾವಿಗೀಡಾಗಿದ್ದ ದಂಪತಿಯ ಪುತ್ರ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇಂದು ಶವವಾಗಿ ಪತ್ತೆಯಾಗಿದ್ದಾನೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಆ. 30ರಂದು ಈ ಅಪಘಾತ ಸಂಭವಿಸಿತ್ತು.
ರಾಯಚೂರಿನ ಮಸ್ಕಿ ತಾಲೂಕಿನ ಗುಡದೂರು ಬಳಿ ನಡೆದಿದ್ದ ಅಪಘಾತದಲ್ಲಿ ಕಾರು ತುಂಗಭದ್ರಾ ಎಡದಂಡೆ ಕಾಲುವೆಗೆ ಬಿದ್ದಿತ್ತು. ಈ ಅಪಘಾತದಲ್ಲಿ ಸೂರ್ಯರಾವ್ (62), ಸುಬ್ಬಲಕ್ಷ್ಮೀ (58) ದಂಪತಿ ಅಂದು ಕಾರಿನಲ್ಲೇ ಮೃತಪಟ್ಟಿದ್ದರು. ಆದರೆ ಕಾರು ಚಲಾಯಿಸುತ್ತಿದ್ದ ಪುತ್ರ ಶ್ರೀನಿವಾಸ (38) ಅಂದು ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಇದನ್ನೂ ಓದಿ: ಗೌರಿ ಹಬ್ಬದ ದಿನವೇ ದುರಂತ: ಕಾಲುವೆಗೆ ಕಾರು ಬಿದ್ದು ದಂಪತಿ ಸಾವು, ನೀರಲ್ಲಿ ಕೊಚ್ಚಿಹೋದ ಮಗ
ಈ ಕುರಿತು ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಚ್ಚಿಹೋದ ಶ್ರೀನಿವಾಸ್ಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆ ಆಗಿರಲಿಲ್ಲ. ಆದರೆ ಇಂದು ಸಿರವಾರ ತಾಲೂಕಿನ ನವಲಕಲ್ ಬಳಿ ಶ್ರೀನಿವಾಸ್ ಶವ ಪತ್ತೆಯಾಗಿದೆ.
ಇಂದಿನ ಯುವಕರಿಗೆ ಹೆಂಡತಿ ಎಂದರೆ ‘ಎಂದೆಂದಿಗೂ ಆಹ್ವಾನಿಸಲಾದ ಚಿಂತೆ’!; ಹೈಕೋರ್ಟ್
ಸಂಭಾವನೆ ಪಡೆಯದೆ ಪುಣ್ಯಕೋಟಿ ರಾಯಭಾರಿ ಆದ ಸುದೀಪ್; ಕಿಚ್ಚನಿಗೆ ಸರ್ಕಾರದಿಂದಲೇ ಬರ್ತ್ಡೇ ಗಿಫ್ಟ್
ವಿವಾದಕ್ಕೀಡಾಯ್ತು ಅಂಬೇಡ್ಕರ್ ಹೋಲಿಕೆಯ ಗಣೇಶ ಮೂರ್ತಿ ಪ್ರತಿಷ್ಠಾಪನೆ!; ದಲಿತರ 2 ಗುಂಪುಗಳ ಮಧ್ಯೆ ವಾಗ್ವಾದ..