ನವದೆಹಲಿ: ಕರೊನಾ ಲಾಕ್ಡೌನ್ ಮಧ್ಯೆ ಭಾರತದಲ್ಲಿ ಸಿಲುಕಿರುವ ವಿವಿಧ ದೇಶಗಳ ಪ್ರಜೆಗಳನ್ನು ಅವರ ದೇಶಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಇದಕ್ಕೆಂದೇ ವಿಶೇಷ ವಿಮಾನಗಳು ಸಂಚರಿಸುತ್ತಿವೆ. ಮಾ.24ಕ್ಕೂ ಮೊದಲು ಭಾರತಕ್ಕೆ ಬಂದಿದ್ದ ಹಲವು ದೇಶಗಳ ಜನರು ಇಲ್ಲಿಯೇ ಸಿಲುಕಿಕೊಂಡಿದ್ದರು. ಭಾರತದ ವಿಶೇಷ ಫ್ಲೈಟ್ಗಳು ಮೂಲಕ ಅವರನ್ನು ಆಯಾ ದೇಶಗಳಿಗೆ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಭಾರತದ ಈ ಕೆಲಸಕ್ಕೆ ಜರ್ಮನಿ, ಟರ್ಕಿ, ಇರಾನ್, ಪಾಕಿಸ್ತಾನ ಸೇರಿ ಅನೇಕ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಹಾಗೇ ಸಿಂಗಾಪುರ ಕೂಡ ಭಾರತಕ್ಕೆ ಧನ್ಯವಾದ ಹೇಳಿದೆ. ಶುಕ್ರವಾರ ಮತ್ತು ಇಂದು ಸಿಂಗಾಪುರದ ಒಟ್ಟು 699 ನಾಗರಿಕರನ್ನು ಭಾರತದಿಂದ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.
ನವದೆಹಲಿಯಲ್ಲಿರುವ ಸಿಂಗಾಪುರ ಹೈ ಕಮೀಷನ್, ಮುಂಬೈನಲ್ಲಿರುವ ಸಿಂಗಾಪುರದ ರಾಯಭಾರಿ ಕಚೇರಿ ಮತ್ತು ಚೆನ್ನೈನಲ್ಲಿನ ದೂತಾವಾಸ ಕಚೇರಿಗಳು ಜಂಟಿ ಸಹಕಾರದೊಂದಿಗೆ ಈ ಸ್ಥಳಾಂತರ ಕಾರ್ಯ ನಡೆದಿದೆ. ದೆಹಲಿ, ಚೆನ್ನೈ, ಮುಂಬೈ ಏರ್ಪೋರ್ಟ್ಗಳಿಂದ ವಿಮಾನ ವ್ಯವಸ್ಥೆ ಮಾಡಲಾಗಿತ್ತು.
ಸಿಂಗಾಪುರದ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕಳಿಸಿಕೊಟ್ಟ ಭಾರತಕ್ಕೆ ಧನ್ಯವಾದಗಳು ಎಂದು ಸಿಂಗಾಪುರ ಸರ್ಕಾರ ಹೇಳಿದೆ. (ಏಜೆನ್ಸೀಸ್)