ಬೆಂಗಳೂರು: ರಾಜ್ಯದಲ್ಲಿ ಕರೊನಾ ನಿಯಂತ್ರಿಸಲು ಸರ್ಕಾರ ಯುದ್ಧೋಪಾದಿಯಲ್ಲಿ ಕ್ರಮಕೈಗೊಂಡಿದ್ದು, ವೈರಾಣು ನಿಯಂತ್ರಣಕ್ಕೆ ಸಾಕಷ್ಟು ಹಣಕಾಸಿನ ಅಗತ್ಯ ಇರುವ ಹಿನ್ನೆಲೆಯಲ್ಲಿ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಕಾರ್ಯಕ್ಕೆ ದೇಣಿಗೆ ಸಲ್ಲಿಸಲು ಇಚ್ಚಿಸುವ ದಾನಿಗಳು ಅಧಿಕೃತ ಬ್ಯಾಂಕ್ ಖಾತೆಗೆ ಧನಾದೇಶ/ ಬೇಡಿಕೆ ಹುಂಡಿ/ ವಿದ್ಯುನ್ಮಾನ ವರ್ಗಾವಣೆ ಮೂಲಕವೂ ಸಲ್ಲಿಸಬಹುದಾಗಿದೆ ಎಂದು ಸಿಎಂ ಮನವಿ ಮಾಡಿದ್ದಾರೆ.
ದೇಣಿಗೆ ಸಲ್ಲಿಸಬಹುದಾದ ಖಾತೆ /ವಿಳಾಸ
ಖಾತೆಯ ಹೆಸರು : Chief Minister Relief Fund Covid-19 ಬ್ಯಾಂಕ್ ಹೆಸರು : S.B.I. (State Bank of India) ಶಾಖೆ : Vidhana Soudha Branch ಸಂಖ್ಯೆ : 39234923151 ಐ.ಎಫ್.ಎಸ್.ಸಿ. ಕೋಡ್ : ಖಆಐಘ0040277 ಎಂ.ಐ.ಸಿ.ಆರ್.
ಸಂಖ್ಯೆ : 560002419 ಚೆಕ್/ ಡಿಡಿ ಕಳುಹಿಸಬೇಕಾದ ವಿಳಾಸ : ನಂ.235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು- 560001. ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆಕಾಯ್ದೆ 80ಜಿ (2)ರಡಿ ತೆರಿಗೆ ವಿನಾಯಿತಿಯಿದೆ. ಆದಾಯ ತೆರಿಗೆ ವಿನಾಯಿತಿ ಪಡೆಯಲು PAN NO. AAAGC1692P ಅಥವಾ GGGG 0000G ಅನ್ನು ಬಳಸಬಹುದಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಧೂಮಪಾನ ಮಾಡುವವರಿಗೆ ಕರೊನಾ ವೈರಸ್ ತುಂಬಾ ಪರಿಣಾಮ ಬೀರಲಿದೆಯೇ? ಸಂಶೋಧನೆ ಹೇಳಿದ್ದೇನು?