ಬಳ್ಳಾರಿ: ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಅಗತ್ಯ ಸುರಕ್ಷತಾ ಕ್ರಮವೂ ಇಲ್ಲದೆ, ಕನಿಷ್ಠ ಪಿಪಿಇ ಕಿಟ್ಗಳ ಸೌಲಭ್ಯವೂ ಇಲ್ಲದೆ ಕೆಲಸ ನಿರ್ವಹಿಸುತ್ತಿರುವ ಕರೊನಾ ವಾರಿಯರ್ಗಳು ತಾಲೂಕು ಆರೋಗ್ಯಾಧಿಕಾರಿ ಎದುರು ಕಣ್ಣೀರಾಕುತ್ತ, ತಮಗೂ ಕರೊನಾ ಪರೀಕ್ಷೆ ಮಾಡಿ ಎಂದು ಗೋಗರೆದಿದ್ದಾರೆ.
“ಆರೋಗ್ಯ ಸಿಬ್ಬಂದಿಗೆ ತಪಾಸಣೆ ಮಾಡುವುದಿಲ್ಲ. ಕೆಲಸ ಮಾಡುತ್ತಿರೋ, ಇಲ್ಲವೋ” ಎಂದು ಟಿಎಚ್ಒ ಡಿ.ಭಾಸ್ಕರ ಗದರಿಸಿದ್ದಾರೆ. ವಿಚಲಿತರಾದ ಸಿಬ್ಬಂದಿ “ನಮ್ಮನ್ನೇ ನಂಬಿದ ಕುಟುಂಬಗಳಿವೆ. ಎಲ್ಲರ ಆರೋಗ್ಯ ತಪಾಸಣೆ ಮಾಡುವ ನಮ್ಮನ್ನೇ ತಪಾಸಣೆಗೆ ಒಳಪಡಿಸದಿದ್ದರೆ ಕುಟುಂಬಗಳ ರಕ್ಷಣೆ ಹೇಗೆ?” ಎಂದು ಗದ್ಗದಿತರಾದರು. ಇದನ್ನೂ ಓದಿರಿ video/ ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್!
”ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಕರೊನಾ ಪಾಸಿಟಿವ್ ವ್ಯಕ್ತಿ ಓಡಾಡಿದ್ದಾನೆ. ನಮ್ಮನ್ನು ಪರೀಕ್ಷೆಗೊಳಪಡಿಸಿ” ಎಂದು ಆಸ್ಪತ್ರೆಯ ಸಿಬ್ಬಂದಿ ಶುಕ್ರವಾರ ಆಗ್ರಹಿಸಿದರು. ”ಜನರಲ್ ಮತ್ತು ಕರೊನಾ ರೋಗಿಗಳು ಒಂದೇ ಕಡೆ ತಪಾಸಣೆಗೆ ಬರುತ್ತಿರುವುದರಿಂದ ರೋಗ ಹರಡುವಿಕೆ ಹೆಚ್ಚಾಗಿದೆ. ನಮ್ಮಲ್ಲಿ ಕನಿಷ್ಠ ಪಿಪಿಇ ಕಿಟ್ಗಳೂ ಇಲ್ಲ. ಈಗಾಗಲೇ ಒಬ್ಬ ವೈದ್ಯ ಮತ್ತು ನರ್ಸ್ಗೆ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಎಲ್ಲ ಸಿಬ್ಬಂದಿಗೆ ಪರೀಕ್ಷೆ ಮಾಡಿ” ಎಂದು ಕಣ್ಣೀರಿಟ್ಟರು.
ಸ್ಥಳಕ್ಕೆ ಜಿಲ್ಲಾಧಿಕಾರಿಯೇ ಬಂದು ಸಮಸ್ಯೆ ಬಗೆಹರಿಸಲಿ ಎಂದು ಆಸ್ಪತ್ರೆ ಎದುರು ಜಮಾವಣೆಗೊಂಡರು. ಮಧ್ಯಪ್ರವೇಶಿಸಿದ ತಹಸೀಲ್ದಾರ್ ಎಚ್.ವಿಶ್ವನಾಥ, ಎಸಿ ಜತೆ ಚರ್ಚಿಸಿ ಅಗತ್ಯ ಸೌಕರ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಕರೊನಾ ವಾರಿಯರ್ಸ್ ಸುಮ್ಮನಾದರು.
ಬೆಂಗಳೂರಲ್ಲಿ ಪೊಲೀಸರಿಗೂ ಸಿಕ್ತಿಲ್ಲ ಟ್ರೀಟ್ಮೆಂಟ್! ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಮುಖ್ಯಪೇದೆ ಬಲಿ