More

    ಕಾಮಗಾರಿ ಅಪೂರ್ಣ,ಧೂಳಿನಿಂದ ತುಂಬಿದ ರಸ್ತೆ ;ಸವಾರರಿಗೆ ತೊಂದರೆ

    ಬಂಟ್ವಾಳ: ಬಿ.ಸಿ ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ನಿರ್ಮಾಣ ಕಾರ್ಯ ಮಳೆಗಾಲಕ್ಕಿಂತ ಮೊದಲು ಪೂರ್ಣಗೊಳ್ಳುವುದು ಅಸಾಧ್ಯವಾಗಿದ್ದು, ನಿರೀಕ್ಷೆಯಂತೆ ಈ ಬಾರಿಯೂ ಮಳೆಗಾಲದಲ್ಲಿ ವಾಹನ ಚಾಲಕರು, ಪಾದಚಾರಿಗಳು ತೀವ್ರ ತೊಂದರೆ ಅನುಭವಿಸುವುದು ನಿಶ್ಚಿತ.

    ಈ ಭಾಗದ ರಸ್ತೆಯಲ್ಲಿ ಧೂಳಿನ ಸಮಸ್ಯೆ ಇದ್ದು, ಹವಾನಿಯಂತ್ರಿತ ವಾಹನಗಳು ಹೊರತುಪಡಿಸಿ ಸಾಮಾನ್ಯ ವಾಹನಗಳ ಸಂಚಾರ ಕಷ್ಟ. ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಕಲ್ಲಡ್ಕ, ದಾಸಕೋಡಿ, ಮಾಣಿ ಭಾಗದಲ್ಲಿ ಧೂಳು ಹರಡದಂತೆ ನೀರು ಹಾಕಿ ಕ್ರಮ ಕೈಗೊಂಡರೂ ಅನೇಕ ಕಡೆ ರಸ್ತೆಗಳಿಗೆ ನೀರು ಸಿಂಪಡಿಸಲಾಗುತ್ತಿಲ್ಲ. ದೊಡ್ಡ ವಾಹನಗಳ ಸಂಚಾರದಿಂದ ದೊಡ್ಡ ಪ್ರಮಾಣದಲ್ಲಿ ಧೂಳು ಹರಡಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

    ಪ್ರಸ್ತುತ ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿಯ ಕಲ್ಲಡ್ಕ ಪೇಟೆಯಲ್ಲಿ 6 ಲೇನ್‌ಗಳ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಫಿಲ್ಲರ್ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts