ಬೆಂಗಳೂರು: ಪ್ರತಿಭಟನೆ ಮುಗಿದ ಬಳಿಕ ರಾಜಭವನದತ್ತ ಮಹಿಳಾ ಶಾಸಕರೆಲ್ಲರೂ ಮೆರವಣಿಗೆ ಹೋಗ್ತಿದ್ವಿ. ಈ ವೇಳೆ ಪೊಲೀಸರು ನಮ್ಮನ್ನು ತಳ್ಳಿದ್ರು, ಕೂದಲು ಎಳೆದ್ರು. ನನ್ನನ್ನು ಎಲ್ಲಾ ಕಡೆ ಮುಟ್ಟಲು ಬಂದ್ರು, ಆಗ ನನಗೆ ತಲೆ ಸುತ್ತು ಬಂದಿತ್ತು. ಇಪ್ಪತ್ತು ಜನ ನನ್ನ ಎಲ್ಲಾ ಕಡೆ ಎಳೆದಾಡಿದ್ರು, ಈ ವೇಳೆ ನನಗೆ ಹೇಗಾಗಿರಬೇಕು?… ಹೀಗಂತ ಹೇಳಿದ್ದು ಜಯನಗರ ಶಾಸಕಿ ಸೌಮ್ಯರೆಡ್ಡಿ.
ಬೆಂಗಳೂರಲ್ಲಿ ಬುಧವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಮಹಿಳಾ ಪೊಲೀಸ್ ಪೇದೆ ಮೇಲೆ ಕೈ ಮಾಡುವ ಮೂಲಕ ಸೌಮ್ಯರೆಡ್ಡಿ ದಬ್ಬಾಳಿಕೆ ನಡೆಸಿದ್ದರು. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಶಾಸಕಿಯ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲೇ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕಿ, ಪ್ರತಿಭಟನೆ ವೇಳೆ ತಳ್ಳಾಟ ಆಗುತ್ತೆ. ಆದರೆ ಈ ಬಾರಿ ತುಂಬಾ ಅಗ್ರೇಸ್ಸಿವ್ ಆಗಿ ವರ್ತಿಸಿದ್ರು. ನನ್ನನ್ನು ಎಲ್ಲಾ ಕಡೆ ಮುಟ್ಟಲು ಬಂದಾಗ ಆ ಸಂದರ್ಭದಲ್ಲಿ ಆ ರೀತಿ ವರ್ತಿಸಬೇಕಾಯ್ತು. ಪೊಲೀಸರು ನಮ್ಮನ್ನು ಕ್ರಿಮಿನಲ್ ತರ ನೋಡಿದ್ರು. ನಾನು ಯಾರಿಗೂ ಹೊಡೆಯಲು ಹೋಗಿಲ್ಲ ಎಂದರು. ಇದನ್ನೂ ಓದಿರಿ ಪ್ಲೀಸ್ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!
ಮೆರವಣಿಗೆ ಹೊರಟ ನಮ್ಮನ್ನು ಪೊಲೀಸರೇ ಒತ್ತಾಯ ಪೂರ್ವಕವಾಗಿ ನಮ್ಮನ್ನು ಮುಟ್ಟಿ, ಗಾಡಿಗೆ ಹತ್ತಿಸಲು ಮುಂದಾದ್ರು. ನಾನು ಊಟ ಮಾಡಿರಲಿಲ್ಲ, ಆ ವೇಳೆ ತಲೆ ಸುತ್ತು ಬಂತು. ಯಾರೇ ಆಗಲಿ ಆ ರೀತಿ ವರ್ತಿಸಿದ್ರೆ ಏನು ಮಾಡ್ತಾರೆ? ಎಂದ ಶಾಸಕಿ, ಆದರೂ ಆ ವೇಳೆಯ ನನ್ನ ಪ್ರತಿಕ್ರಿಯೆಯಿಂದ(ಹೂ ದಿ ಹೆಲ್ ಎಂಬ ಮಾತಿಗೆ) ಯಾರಿಗಾದರೂ ನೋವಾಗಿದ್ರೆ ಕ್ಷಮೆ ಕೇಳುತ್ತೇನೆ ಎಂದರು.
ಪ್ರಾಣಿಗಳನ್ನು ಪ್ರೀತಿಯಿಂದ ನೋಡುವವಳು ನಾನು. ನನಗೇ ಆ ರೀತಿ ಮಾಡಿದ್ದಾರೆ. ಪೊಲೀಸ್ ಆಯುಕ್ತರಿಗೆ ನಾನು ಇಷ್ಟೊಂದು ದೌರ್ಜನ್ಯ ಏಕೆ ನಡೆಸಿದ್ರಿ? ಎಂದು ಕೇಳಿದೆ. ಪ್ರತಿಭಟನೆ ವೇಳೆ ಈ ರೀತಿ ಆಗುತ್ತೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ನಾನು ಮಹಿಳಾ ಕಾನ್ಸ್ಟೇಬಲ್ನನ್ನು ಹೊಡೆದಿಲ್ಲ ಎಂದರು.
ಮಹಿಳಾ ಪೇದೆ ಮೇಲೆ ಶಾಸಕಿಯ ದಬ್ಬಾಳಿಕೆಯನ್ನು ಟ್ವೀಟ್ ಮೂಲಕ ಕಟುವಾಗಿ ಟೀಕಿಸಿದ್ದ ಬಿಜೆಪಿ ನಾಯಕರ ಕುರಿತು ಪ್ರತಿಕ್ರಿಯಿಸಿದ ಶಾಸಕಿ, ಬಿಜೆಪಿ ನಾಯಕರು ಪದೇಪದೆ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನನಗೆ ರೌಡಿ ಪದ ಬಳಸಿದ್ದಾರೆ, ಇದು ಸರಿಯಲ್ಲ. ನಾನು ಅನಿಮಲ್ ಆ್ಯಕ್ಟಿವಿಸ್ಟ್, ನನ್ನ ಬಗ್ಗೆ ಈ ರೀತಿಯ ಪದ ಬಳಕೆ ತುಂಬಾ ನೋವು ನೀಡುತ್ತಿದೆ ಎಂದರು.
ನೂರಾರು ಜನರ ಎದುರಲ್ಲೇ ಮಹಿಳಾ ಪೊಲೀಸ್ ಮೇಲೆ ಶಾಸಕಿ ಸೌಮ್ಯರೆಡ್ಡಿ ದಬ್ಬಾಳಿಕೆ! ಹಲ್ಲೆಯ ದೃಶ್ಯ ವೈರಲ್
ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 13 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್ಕ್ಲೂಸಿವ್ ಮಾಹಿತಿ ಇಲ್ಲಿದೆ