ನವದೆಹಲಿ: ಬಾಬ್ರಿ ಮಸೀದಿ ಲಾಕ್ ಓಪನ್ ಮಾಡಿದ್ದು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಹೌದೋ..ಅಲ್ಲವೋ ಎಂಬ ವಿಷಯದ ಬಗ್ಗೆ ಕಾಂಗ್ರೆಸ್ಗೇ ಗೊಂದಲವಿದೆ ಎಂದು ರಾಜ್ಯಸಭಾ ಸಂಸದ, ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ವ್ಯಂಗ್ಯವಾಡಿದ್ದಾರೆ.
ಒಂದು ಕಡೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಹೇಳುತ್ತಾರೆ, ಬಾಬ್ರಿ ಮಸೀದಿಯ ಬೀಗ ತೆಗೆದಿದ್ದೇ ರಾಜೀವ್ ಗಾಂಧಿಯವರು ಎಂದು. ಇನ್ನೊಂದು ಕಡೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು, ಬಾಬ್ರಿ ಮಸೀದಿ ಬೀಗಗಳನ್ನು ಒಡೆಸಿದ್ದು, ರಾಜೀವ್ ಗಾಂಧಿ ಅಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ. ತಮ್ಮ ನಾಯಕ ರಾಜೀವ್ ಗಾಂಧಿ ಏನು ಮಾಡಿದ್ದರು ಎಂಬ ಬಗ್ಗೆ ಅವರದ್ದೇ ಪಕ್ಷದ ಈಗಿನ ಮುಖಂಡರಿಗೆ ಗೊತ್ತಿಲ್ಲ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ನನಗೆ ಇನ್ನೂ ಪೊಲೀಸ್ ಭದ್ರತೆ ಕೊಟ್ಟಿಲ್ಲ; ಅಖಂಡ ಶ್ರೀನಿವಾಸ ಮೂರ್ತಿ
ಇನ್ನು ರಾಜ್ಯದಲ್ಲಿ ಕರೊನಾ ವೈರಸ್ ಹೆಚ್ಚುತ್ತಿರುವ ಬಗ್ಗೆ ಮಾತನಾಡಿದ ಸಿಂಧಿಯಾ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಕರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ. ದಿನಕ್ಕೆ 18-20 ತಾಸು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿಂಧಿಯಾ ಅವರು ಬಿಜೆಪಿಗೆ ಸೇರಿದ ನಂತರ ಇಂದು ಮೊದಲ ಬಾರಿಗೆ ಇಂಧೋರ್ಗೆ ಆಗಮಿಸಿದ್ದಾರೆ. ಇಲ್ಲಿನ ಸಚಿವ ತುಳಸಿ ಸಿಲಾವತ್ ಮತ್ತು ಇತರ ಬಿಜೆಪಿ ಮುಖಂಡರು ಅವರನ್ನು ಸ್ವಾಗತಿಸಿದರು. (ಏಜೆನ್ಸೀಸ್)
ಬಿಎಸ್ಎಫ್ ಡಿಜಿ ಆಗಿ ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಆಸ್ತಾನಾ ನೇಮಕ